Saturday, September 21, 2024
ಸುದ್ದಿ

” ಭಾರತದ ಕಾನೂನು ಗೌರವಿಸಲು ಸಾಧ್ಯವಿಲ್ಲದಿದ್ರೆ ಪಾಕಿಸ್ತಾನಕ್ಕೆ ಹೋಗಿ ” – ಮಂಗಳೂರಿನಲ್ಲಿ SDPI ಕಾರ್ಯಕರ್ತರು ನಡೆಸಿದ ಆಶಾ ಕಾರ್ಯಕರ್ತೆಯ ಮೇಲೆನ ಹಲ್ಲೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಬಜರಂಗದಳ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲ್ಲೂರಿನ ಬಳಿ‌ ಕರ್ತವ್ಯ ನಿರತ ಆಶಾ ಕಾರ್ಯಕರ್ತೆ ವಸಂತಿ ಎಂಬವರ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಕಹಳೆನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಮೇಲೆ  SDPI ಕಾರ್ಯಕರ್ತರಾದ ಇಸ್ಮಾಯಿಲ್, ಅಶ್ರಫ್ ಎಂಬ ಪಾಪಿಗಳು ಹಲ್ಲೆ ನಡೆಸಿರುವುದು ಖೇಧಕರ, ಈ ನೆಲದ ಕಾನೂನಿಗೆ ಗೌರವ ನೀಡಲು ಆಸಧ್ಯವಾದರೆ ಈ ದೇಶ ಬಿಟ್ಟು ತೊಲಗಿ, ಪಾಕಿಸ್ತಾನಕ್ಕೆ ಹೋಗಿ ಎಂದು ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಬ್ಬರೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಮಾಹಾಮಾರಿ ಕೊರೊನಾ ವಿರುದ್ಧ ದೇಶವೇ ಒಂದಾಗಿ ಜಾತಿ ಬೇದ ಮರೆತು ಹೋರಾಡುತ್ತಿರುವ ಈ ಹೊತ್ತಿನಲ್ಲಿ ಇಂತಹಾ ಕೃತ್ಯ ನಡೆಸುವ ಅಸೈಶ್ನುಗಳು ದೇಶಕ್ಕೆ ಮಾರಕ ಎಂದು ಹೇಳಿದರು.

ಜಾಹೀರಾತು