Friday, September 20, 2024
ಸುದ್ದಿ

ಹಿಂದುಗಳೇನು ಬೇವರ್ಸಿಗಳೇ? ಧಮ್ಮಿದ್ರೆ ಮಠ ಮಂದಿರಗಳಿಗೆ ನೋಟೀಸ್ ನೀಡಿ | ಚೆಲ್ಲಿದ ರಕ್ತಕ್ಕೆ ಸಂವಿಧಾನಿಕ ಭಾಷೆಯಲ್ಲೇ ತಕ್ಕ ಉತ್ತರ ನೀಡುತ್ತೇವೆ – ಅನಂತ್ ಕುಮಾರ್ ಹೆಗಡೆ

ಮಂಗಳೂರು : ಮಂಗಳೂರಿನ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್​​ ಹೆಗಡೆ ಸಿದ್ದರಾಮಯ್ಯ ವಿರುದ್ದಾ ತೀವ್ರವಾಗ್ದಾಳಿ ನಡೆಸಿದ್ದಾರೆ.ಮಠ ವಶಪಡಿಸಲು ಸಿದ್ದರಾಮಯ್ಯರಿಗೆ ಧಮ್ ಇದೇಯೆ..? ಧಮ್ ಇದ್ದರೆ ನೋಟಿಸ್ ನೀಡಿ ಎಂದು ಸವಾಲು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

20 ಪರ್ಸೆಂಟ್ ಅಲ್ಪಸಂಖ್ಯಾತರ ಓಟಿಗಾಗಿ ಜೊಲ್ಲು ಸುರಿಸ್ತೀರಲ್ಲಾ , ಹಾಗಾದ್ರೆ 80 ಶೇಕಡ ಇರುವ ಬಹುಸಂಖ್ಯಾತ ಹಿಂದುಗಳು ಹಿಂದುಗಳು ಏನು ಬೇವರ್ಸಿಗಳಾ. ನಮ್ಮ ಹಿಂದುಗಳ ಓಟಿಗೆ ಬೆಲೆ ಇಲ್ಲವೇ ಸೋದರರೇ ಎಂದು ಪ್ರಶ್ನಿಸಿದರು. ಕಳೆದ ನಾಲ್ಕೂವರೆ ವರ್ಷದಲ್ಲಿ 7748ಕ್ಕೂ ಹೆಚ್ಚು ಕೊಲೆ ನಡೆದಿದೆ 9400 ಡಕಾಯಿತಿ, 7538 ರೇಪ್, 11900 ಕಿಡ್ನಾಪ್, 35 ಸಾವಿರ ಚೀಟಿಂಗ್ ಕೇಸ್, 11 ಲಕ್ಷ ಕ್ರಿಮಿನಲ್ ಕೇಸ್ ಆಗಿದೆ. ಸಿದ್ದರಾಮಯ್ಯ ಗೊತ್ತಿಲ್ಲದಂತೆ ಸಾವಿನ ಭಾಗ್ಯ ಕೊಟ್ಟಿದ್ದಾರೆ. ಪಾತಕ ಸರಕಾರ ಪಾಪಿ ಮುಖ್ಯಮಂತ್ರಿ ಇದು ಕರ್ನಾಟಕದ ದೌರ್ಭಾಗ್ಯ ಎಂದು ಸರ್ಕಾರವನ್ನ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಜಾಹೀರಾತು

 

ವರದಿ : ಕಹಳೆ ನ್ಯೂಸ್