Friday, September 20, 2024
ಸುದ್ದಿ

ಹಿಂದೂಗಳ ಕ್ಷಮೆಯಾಚಿಸಿದ್ದಿದ್ದರೆ, ಮೊಯಿದಿನ್ ಬಾವಾಗೆ ತಕ್ಕ ರೀತಿಯಲ್ಲಿ ನಾವು ಉತ್ತರಿಸುತ್ತೇವೆ – ಕೆ.ಆರ್.ಶೆಟ್ಟಿ

ಮಂಗಳೂರು : ಚುನಾವಣೆ ಹತ್ತಿರ ಬರುತ್ತಿರುವಂತೆ ಮತಾಂದ ಶಾಸಕನ ಆಟೋಪಗಳು ಎಲ್ಲೆ ಮೀರುತ್ತಿವೆ. ನಾನು ಜಾತ್ಯಾತೀತವಾದಿ ಎಂದು ಬಿಂಬಿಸಿಕೊಳ್ಳುವ ತೆವಳಲ್ಲಿ ಪದೇ ಪದೆ ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹಿಂದೂ ಸಂರಕ್ಷಣಾ ಸಮಿತಿ ಮುಖ್ಯಸ್ಥ ಕೆ.ಆರ್. ಶೆಟ್ಟಿ ಅಡ್ಯಾರ್ ಪದವು ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ತನ್ನ ರಾಜಕೀಯ ತೆವಲಿಗೆ ದೇವರ ಭಕ್ತಿಗೀತೆಗಳನ್ನು ಬಳಸಿಕೊಳ್ಳುತಿದ್ದಾರೆ. ಅಭಿವೃದ್ಧಿಯ ವಿಷಯಕ್ಕೆ ಬಂದರೆ ರಾತ್ರಿಯಿಡೀ ಬೊಲಿಕಿರಿ ಎಂದು ಹೇಳುತ್ತಾ ತಿರುಗಾಡುತ್ತಿರುವ ಇವರು ಒಮ್ಮೆ ರಾತ್ರಿಯಾಗುವ ಹೊತ್ತಿಗೆ ತನ್ನ ಕ್ಷೇತ್ರದಲ್ಲಿ ಒಮ್ಮೆ ತಿರುಗಾಡಿ ನೋಡಲಿ ಲೈಟ್ ಕಂಬಗಳಲ್ಲಿರುವ ಎಷ್ಟು ಲೈಟುಗಳು ಉರಿಯುತ್ತಿವೆ ಎಂದು. ಚುಣಾವನೆಗೆ ದಿನ ಹತ್ತಿರ ಬರುವ ಸಂದರ್ಭದಲ್ಲಿ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಹಾಕಿರುವ ಇವರ ಕ್ಷೇತ್ರದ ರಸ್ತೆಗಳಲ್ಲಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾರ್ವಜನಿಕರನ್ನೊಮ್ಮೆ ಸೌಜನ್ಯಕ್ಕೂ ಬೇಟಿಯಾಗುವ ಮನಸ್ಸು ಮಾಡದಿರುವ ಇಂತಹ ಶಾಸಕರ ಅಗತ್ಯ ನಮಗಿಲ್ಲ.

ಜಾಹೀರಾತು

ಹಿಂದೂಗಳ ಭಾವನೆಗಳ ಜೊತೆ ಚಲ್ಲಾಟಕ್ಕೆ ನಿಂತಿರುವ ಮತಾಂದನಾದ ಮಾನ್ಯ ಶಾಸಕರು ತಾನು ಮಾಡಿರುವ ತಪ್ಪಿಗೆ ಬೇಷರತ್ ಹಿಂದುಗಳ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಇದಕ್ಕೆಲ್ಲ ಹಿಂದೂ ಸಂರಕ್ಷಣಾ ಸಮಿತಿ ಉತ್ತರ ಕೊಡುವುದಕ್ಕೆ ತಯಾರಾಗಿ ನಿಂತಿದೆ ಎಂದು ಹೇಳಿದರು.

ವಿಡಿಯೋ :

https://youtu.be/Kf0sFij5Bm8

ವರದಿ : ಕಹಳೆ ನ್ಯೂಸ್