Friday, September 20, 2024
ಸುದ್ದಿ

ಕೊನೆಗೂ ದತ್ತಾತ್ರೇಯ ಹೊಸಬಾಳೆಗೆ ದಕ್ಕಲಿಲ್ಲ ಆರ್.ಎಸ್.ಎಸ್. ಸರಕಾರ್ಯವಾರಹ ಪಟ್ಟ | ಭಯ್ಯಾಜಿ ಜೋಶಿ ಪುನರಾಯ್ಕೆ – ಕಹಳೆ ನ್ಯೂಸ್

ನಾಗಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತ್ಯುನ್ನತ ಎರಡನೇ ಸ್ಥಾನ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಜವಾಬ್ದಾರಿಯನ್ನು ಪ್ರಸ್ತುತ ಸುರೇಶ್ ಭಯ್ಯಾಜಿ ಜೋಶಿ ಹೊಂದಿದ್ದು, ನಿನ್ನೆ ನಡೆದ ಭೈಠಕ್ ನಲ್ಲಿ ಮತ್ತೆ ಮೂರು ವರ್ಷದ ಅವಧಿಗೆ (2018-21) ಪುನರಾಯ್ಕೆಯಾಗಿದ್ದಾರೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ದತ್ತಾತ್ರೇಯ ಹೊಸಬಾಳೆಯ ಹೆಸರು ಇತ್ತು :

ಜಾಹೀರಾತು
Dattatray-Hosabale-
Dattatray Hosabale

ಕರ್ನಾಟಕದವರೂ, ಪ್ರಬಲ ಬ್ರಾಹ್ಮಣ ನೇತಾರರಾದ ದತ್ತಾತ್ರೇಯ ಹೊಸಬಾಳೆ ಹೆಸರು ಈ ಹುದ್ದೆಗೆ ಕೇಳಿ ಬರುತ್ತಿತ್ತು. ಆದರೆ, ಹೊಸಬಾಳೆಯವರ ಒಂದಷ್ಟು ನಿಲುವು ಮತ್ತು ಕೆಲವು ಸಂದರ್ಭದಲ್ಲಿ ಅವರ ನಡೆಗಳನ್ನು ಸೂಕ್ಮವಾಗಿ ಪರಿಗಣಿಸಿದ ಹಿನ್ನಲೆಯಲ್ಲಿ ಈ ಜವಾಬ್ದಾರಿಯಿಂದ ಅವರನ್ನು ದೂರ ಇಡಲಾಗಿದೆ. ಅಲ್ಲದೆ, ಪ್ರತಿಷ್ಠಿತ ಮಠದ ಸ್ವಾಮೀಜಿಯವರ ವಿರುದ್ಧ ಪಿತೂರಿ ನಡೆಸಿದ ಬಣದ ಜೊತೆ ಗುರುತಿಸಿಕೊಂಡಿದ್ದಾರೆ ಎಂಬುದು ಹಿರಿಯರಲ್ಲಿ ಅಸಮಾಧಾನ ತಂದಿತ್ತು. ಈ ಎಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತೆ ಭಯ್ಯಾಜಿ ಜೋಶಿಯವರನ್ನೇ ಆಯ್ಕೆ ಮಾಡಲಾಗಿದೆ. ಜೋಶಿ 2009ನೇ ಇಸವಿಯಿಂದ ಇವರು ಸರಕಾರ್ಯವಾಹರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈಗ ಮತ್ತೆ ಮೂರು ವರ್ಷಗಳ ಕಾಲ ಅವರೇ ಆ ಜವಾಬ್ದಾರಿಯಲ್ಲಿ ಮುಂದುವರಿಯಲಿದ್ದಾರೆ.

ವರದಿ : ಕಹಳೆ ನ್ಯೂಸ್