Friday, September 20, 2024
ಸುದ್ದಿ

ಕಂಚಿ ಮಠಕ್ಕೆ ರಾಘವೇಶ್ವರ ಶ್ರೀ ಭೇಟಿ ! ಪ್ರಮುಖ ವಿಷಯಗಳ ಬಗ್ಗೆ ಚರ್ಚೆ – ಕಹಳೆ ನ್ಯೂಸ್

ಕಾಂಚಿಪುರಂ : ಇತ್ತೀಚೆಗೆ ಬ್ರಹ್ಮೈಕ್ಯರಾದ ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗಳು ಆರಾಧನಾ ಮಹೋತ್ಸವದಲ್ಲಿ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪಾಲ್ಗೊಂಡರು.

ಕಂಚಿ ಕಾಮಕೋಟಿ ಮಠಕ್ಕೆ ಭೇಟಿ ನೀಡಿದ ಶ್ರೀಗಳು ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಕಾಂಚಿ ಕಾಮಕೋಟಿ ಶಂಕರ ಪೀಠದ ಶ್ರೀವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಬ್ರಹ್ಮಲೀನ ಹಿರಿಯ ಶ್ರೀಗಳ ಜೊತೆಗಿನ ಒಡನಾಟವನ್ನು ರಾಘವೇಶ್ವರಶ್ರೀಗಳು ನೆನಪಿಸಿದರು. ಈ ಸಂದರ್ಭದಲ್ಲಿ ‘ಎರಡೂ ಮಠಗಳ ಬಾಂಧವ್ಯ, ಹಿಂದೂಗಳ ಸಂಘಟನೆ, ಸನಾತನ ಸಂಸ್ಕೃತಿಗಳ ರಕ್ಷಣೆ, ಸಂತರ ಸಂಘಟನೆ ಹಾಗೂ ಗೋವಂಶ ರಕ್ಷಣೆ ಹಾಗೂ ಗೋಸ್ವರ್ಗ ಯೋಜನೆ’ಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಿದರು.

ಎರಡೂ ಮಠಗಳ ಸಹಯೋಗದಲ್ಲಿ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಧನಾತ್ಮಕ ಚಿಂತನೆ ನಡೆಸಿದರು.