Friday, September 20, 2024
ಸುದ್ದಿ

ಪುತ್ತೂರಿನ ಬಲ್ನಾಡಿನ ಉಜ್ರುಪಾದೆಯಲ್ಲಿ ಮನೆಯ ಹಟ್ಟಿಯಿಂದಲ್ಲೇ ಗೋ ಕಳ್ಳತನ ; ಹಿಂದೂ ಸಂಘಟನೆ ಮುಖಂಡರು ಮನೆಗೆ ಭೇಟಿ – ಕಹಳೆ ನ್ಯೂಸ್

ಪುತ್ತೂರು : ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಗೋಪಾಲಕೃಷ್ಣ ನಾಯಕ್ ಅವರ ಹಟ್ಟಿಗೆ ನುಗ್ಗಿ ಗೋ ಕಳ್ಳತನ ನಡೆಸಿದ್ದಾರೆ. 

ಗೋ ಕಳ್ಳತನ ನಡೆದ ಮನೆಗೆ ಬಜರಂಗದಳ ಕಾರ್ಯಕರ್ತರ ಭೇಟಿ ನೀಡಿದರು ಹಾಗೂ ಇದೇ ಸಂದರ್ಭದಲ್ಲಿ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಗೋ ಕಳ್ಳರಿಗೆ ತಕ್ಕ ಉಗ್ರ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ನೆರವೇರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸಂಪ್ಯಾಠಾಣಾ ಪೋಲೀಸರ ಮೇಲೆ ಮತ್ತೆ ಅರೋಪ ;

ಸದ್ರಿ ಪ್ರಕರಣದಲ್ಲಿ ಕಳ್ಳತನ ಎಂದು ನೀಡಿದ ಕಂಪ್ಲೇಂಟ್ ನ್ನು ಕಾಣೆಯಾಗಿದೆ ಎಂದು ಸಂಪ್ಯ ಪೋಲೀಸ್ಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.


ಈ ಸಂದರ್ಭದಲ್ಲಿ ಬಜರಂಗದಳ ಮುಖಂಡರಾದ ,
ಮುರಳಿ ಕೃಷ್ಣ ಹಸಂತಡ್ಕ, ಜನಾರ್ದನ ಬೆಟ್ಟ, ಬಾಲಸುಬ್ರಹ್ಮಣ್ಯ, ಭರತ್ ಚನಿಲ, ತಿಮ್ಮಪ್ಪ ಗೌಡ, ರವಿ ಕೃಷ್ಣ ಭಟ್, ಹಿಂ.ಜಾ. ವೇ ಮುಖಂಡ ಅಜಿತ್ ರೈ ಹೊಸಮನೆ, ಧನ್ಯ ಕುಮಾರ್ ಬೆಳ್ಳಂದೂರು ಉಪಸ್ಥಿತರಿದ್ದರು.

 

ವರದಿ : ಕಹಳೆ ನ್ಯೂಸ್