Friday, September 20, 2024
ಸುದ್ದಿ

ಗೋಕಳ್ಳರ ವಿರುದ್ಧ ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ ; ಹಿಂದೂಗಳು ಉಗ್ರ ಸ್ವರೂಪ ತಾಳುವ ಮುನ್ನ ಎಚ್ಚೆತ್ತುಕೊಳ್ಳಿ – ಮರಳಿಕೃಷ್ಣ ಹಸಂತ್ತಡ್ಕ

ಪುತ್ತೂರು : ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಅಜ್ಜಿನಡ್ಕ,ಪುಣಚ ದ ಪರಿಸರದಲ್ಲಿ ಇತ್ತಿಚೇಗೆ ನಡೆದ ಗೋಕಳ್ಳತನದ ವಿರುದ್ದ ಇಂದು ಪುಣಚ ಜಂಕ್ಷಣ್ ನಲ್ಲಿ ನಡೆದ ಪ್ರತಿಭಟನಾ ಸಭೆನಡೆಯಿತು.

ಹಿಂದೂಗಳು ಉಗ್ರ ಸ್ವರೂಪ ತಾಳುವ ಮುನ್ನ ಎಚ್ಚೆತ್ತುಕೊಳ್ಳಿ – ಮರಳಿಕೃಷ್ಣ ಹಸಂತ್ತಡ್ಕ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಜರಂಗದಳದ ಪ್ರಾಂತ ಸಹಸಂಚಾಲಕರಾದ ಮುರಳಿಕೃಷ್ಣ ಹಸಂತ್ತಡ್ಕ ಗೋಕಳ್ಳತ್ತನ ಪ್ರಕರಣಗಳು ಹೆಚ್ಚುತ್ತಿದ್ದು ಆರೋಪಿಗಳನ್ನು ಸದೆಬಡಿಯುವ ಕೆಲಸ ಪೋಲೀಸ್ ಇಲಾಖೆ ಮಾಡುಬೇಕು. ಸರಕಾರ ಎಚ್ಚೆತ್ತುಕೊಳ್ಳ ಬೇಕು ಹಿಂದೂಗಳ ಉಗ್ರಸ್ವರೂಪ ತಾಳುವ ಮುನ್ನ ಜಾಗೃತರಾಗಿ, ತಾಕತ್ತಿದ್ದರೆ ಗೋ ಹತ್ಯೆಗೆ ಬೆಂಬಲ ಎಂದು ನೇರ ಹೇಳಿ ಚುನಾವಣೆ ಎದುರಿಸಿ ಎಂದು ಕಾಂಗ್ರೇಸ್ ಗೆ ಸವಾಲು ಹಾಕಿದರು.

ಹಿಂದೂಗಳು ಬೀದಿಗಿಳಿಯಬೇಕಾದೀತು, ಪರಿಣಾಮ ಎದರುರಿಸಲು ಸಿದ್ದರಾಗಿ – ಅರುಣ್ ಕುಮಾರ್ ಪುತ್ತಿಲ

ಪ್ರತಿಭಟನ್ನುದ್ದೇಶಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಇಲ್ಲವಾದರೆ, ಹಿಂದೂಗಳು ಬೀದಿಗಿಳಿಯಬೇಕಾದೀತು. ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ವರದಿ : ಕಹಳೆ ನ್ಯೂಸ್