Saturday, September 21, 2024
ಅಂಕಣದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ದಾಖಲೆ ಸಹಿತ ಪತ್ರಿಕಾಗೋಷ್ಠಿ ನಡೆಸಿ ನಗೆಪಾಟಲಿಗೊಳಗಾದ ಮಾಜಿ ಸಚಿವ ರಮನಾಥ ರೈ ; ” ಬೇಲೆಇಜ್ಜಾಂದಿ ರೈ….. ” ಹೇಳಿಕೆ ಬಿಜೆಪಿಗರಿಗೆ ಆಹಾರ..! – ಕಹಳೆ ನ್ಯೂಸ್

ಬಂಟ್ವಾಳ : ಕೆಲ ಸಮಯದ ಹಿಂದೆ ಮಾಜಿ ಸಚಿವ ರಮನಾಥ ರೈಯವರು ಪತ್ರಿಕಾ ಗೋಷ್ಠಿ ನಡೆಸಿ ಮುಡಿಪು ಕೆಂಪು ಮಣ್ಣು ಗಣಿಗಾರಿಕೆ ಸಂಬಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮೇಲೆ ಅರೋಪ ಹೊರಿಸಿದ್ದರು ನಂತರ ಶಾಸಕ ರಾಜೇಶ್ ನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ನಾನು ತೆಂಕ ಎಡಪದವಿನಲ್ಲಿ ಪತ್ನಿಯ ಹೆಸರಿನಲ್ಲಿ ಕಾನೂನು ಬದ್ದವಾಗಿ ಪರವಾನಿಗೆ ಪಡೆದು ಸರ್ಕಾರಕ್ಕೆ ರಾಯಧನ ಸಲ್ಲಿಸಿ ತಮ್ಮ ಒಡೆತನದ ಒಡ್ಡೂರು ಫಾರ್ಮ್ ನಲ್ಲಿ ಕೆಂಪುಕಲ್ಲಿನ ಗಣಿಗಾರಿಕೆ ಹಲವಾರು ವರ್ಷಗಳಿಂದ ನಡೆಸುತ್ತಿದ್ದೆನೆ ಮಾರ್ಚ್ ನಂತರ ಗಣಿಗಾರಿಕೆ ನಿಲ್ಲಿಸಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸ್ರಷ್ಟಿಕರಣ ನೀಡಿದ್ದರು.

ಮತ್ತೊಮ್ಮೆ ರಮನಾಥ ರೈಯವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದ ರಾಜೇಶ್ ನಾಯ್ಕ್ ವಿರುದ್ದ ದಾಖಲೆ ಸಮೇತ ಸಾಭಿತುಪಡಿಸಲು ಹೋಗಿ ನಗೆಪಾಟಲಿಕ್ಕಿಡಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಮನಾಥ ರೈಯವರು ಸಾಭೀತು ಪಡಿಸಲಾದ ದಾಖಲೆಗಳಲ್ಲಿ ಶಾಸಕ ರಾಜೇಶ್ ನಾಯ್ಕ್ ರವರ ಪತ್ನಿಯಾದ ಉಷಾ ಅರ್ ನಾಯ್ಕ್ ರವರ ಹೆಸರಿನಲ್ಲಿರುವ ಪರವಾನಿಗೆ ಕಾನೂನು ಬದ್ದವಾಗಿದೆ.

ಜಾಹೀರಾತು

ರಮಾನಾಥ ರೈ ಯವರು ಅರೋಪ ಮಾಡಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ
ಕೈರಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ನೀವೆಶನ ಸಮತಟ್ಟು ಮಾಡಲು ಪರವಾನಿಗೆ ನೀಡಿರುವುದು ರೆಡ್ ಸ್ಟೋನ್ ಟ್ರೇಂಡಿಗ್ ಕಾರ್ಪೂರೇಶನ್ ಕಂಪೆನಿಗೆ ಇ ಕಂಪೆನಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರಿಗೆ ಯಾವುದೇ ಸಂಭಂದವಿಲ್ಲ ವೆಂದು ಅವರು ಬಿಡುಗಡೆ ಮಾಡಿರುವ ದಾಖಲೆಗಳಿಂದ ಸಾಭಿತಾಗಿದೆ ರಾಜೇಶ್ ನಾಯ್ಕ್ ರವರ ಪತ್ನಿ ಯ ಹೆಸರಿನಲ್ಲಿರುವ ಲೀಸ್ ನ ಪರಾವನಿಗೆಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ ದಾಖಲೆಗಳನ್ನು ಪರಿಶಿಲಿಸಿದಾಗ ಇ ಹಿಂದೆ ರಾಜೇಶ್ ನಾಯ್ಕ್ ರವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದಂತೆ ತೆಂಕ ಎಡಪದವಿನಲ್ಲಿ ಇರುವುದು ಕಾನೂನು ಬದ್ದ ಪರಾವನಿಗೆ ಮತ್ತು ತೆಂಕೆಡಪದವಿನಿಂದಲೇ ಅವರ ಒಡೆತನನದ ಭೂಮಿಯಿಂದಲೇ ಗಣಿಗಾರಿಕೆ ನಡೆಸಿರುವ ಕುರಿತು ಶಾಸಕರು ಸ್ಪಷ್ಟಪಡಿಸಿದಂತೆ ರೈ ಯವರು ಬಿಡುಗಡೆ ಮಾಡಿದ ದಾಖಲೆಗಳಿಂದ ಸಾಭಿತಾಗಿದೆ ರೈ ಯವರ ಅರೋಪ ಕೇವಲ ರಾಜಕೀಯವೆಂದು ಇವತ್ತಿನ ಪತ್ರಿಕಾ ಗೋಷ್ಠಿ ಅವರ ಮಾತಿನಲ್ಲಿ ಸ್ಪಷ್ಟವಾಗಿದೆ ಎಂದು ಬಿಜೆಪಿ ಹೇಳಿದೆ.

ರಮಾನಾಥ ರೈ ಇರಲಾದೆ ಬಿಟ್ಟುಕೊಂಡು ನಗೆಪಾಟಲಿಗೆ ಇಡಾಗಿದ್ದಾರೆ ಎಂಬ ಬಂಟ್ಚಾಳದ ಬಿಜೆಪಿ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.