Friday, September 20, 2024
ಸುದ್ದಿ

ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಹತ್ಯೆಗೆ ಸ್ಕೆಚ್ ; ನಾಲ್ವರ ಅರೆಸ್ಟ್ – ಕಹಳೆ ನ್ಯೂಸ್

ಮಂಗಳೂರು : ಕರಾವಳಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ ಸ್ವಲ್ಪದರಲ್ಲೇ ತಪ್ಪಿದೆ. ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೂವರನ್ನು ಮಂಗಳೂರು ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಲ್ಲಾಲ್‍ಬಿಟ್ಟಿನ ನಿವಾಸಿ ಪ್ರದೀಪ್ ಪೂಜಾರಿ, ಕನ್ಯಾದ ದಿನೇಶ್ ಬಿಲಿಚಾದ, ಬಂಟ್ವಾಳದ ಶಿವಪ್ರಸಾದ್ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕಿನಗೋಳಿ ಬಳಿಯ ಸಿದ್ಬೂರು ಸಮೀಪ ಈ ಮೂವರು ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಅವರನ್ನು ಹತ್ಯೆಗೈಯಲ್ಲು ಮುಂದಾಗಿದ್ದರು. ರೌಡಿ ನಿರ್ಮೂಲನ ತಂಡದ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಈಶ್ವರ್ ಕಟೀಲ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ತಿಳಿಸಿದ್ದಾರೆ.

Eshwar Kateel

ವರದಿ : ಕಹಳೆ ನ್ಯೂಸ್