Wednesday, April 2, 2025
ಬಂಟ್ವಾಳ

ಕುಲಾಲ ಕುಂಬಾರ ವೇದಿಕೆ ಪಣೋಲಿಬೈಲು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಎಂ ಪಣೋಲಿಬೈಲ್-ಕಹಳೆ ನ್ಯೂಸ್

ಬಂಟ್ವಾಳ: ಕುಲಾಲ ಕುಂಬಾರರ ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕುಲಾಲ್ ಕಂದೂರು ಇವರ ಅಧ್ಯಕ್ಷತೆಯಲ್ಲಿ ಜನವರಿ 10ರಂದು ಸಂಜೆ 6.30ಕ್ಕೆ ಪಣೋಲಿಬೈಲು ಇದರ ನಾಲ್ಕನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶ್ರೀ ಕೃಷ್ಣ ಭಜನಾ ಮಂದಿರ ಪಣೋಲಿಬೈಲು ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೊರಗಪ್ಪ ಕುಲಾಲ ಜಾಡಕೋಡಿ, ಗೌರವ ಅಧ್ಯಕ್ಷರಾದ ರಮೇಶ್ ಕುಲಾಲ್, ಗೌರವ ಸಲಹೆಗಾರ ಲಿಂಗಪ್ಪ ಬಂಗೇರ ಕಾರಜೆ, ಉಪಾಧ್ಯಕ್ಷ ರಮೇಶ್ ಎಂ ಪಣೋಲಿಬೈಲು ಭಾಗವಹಿಸಿದ್ದರು. ಶಿವರಾಮ ಮರ್ತಾಜೆ ಸ್ವಾಗತಿಸಿದರು. ಶ್ರೀ ಶಿವರಾಮ್ ವರದಿ ಮಂಡಿಸಿದರು. ನೂತನ ಅಧ್ಯಕ್ಷರಾಗಿ ರಮೇಶ್ ಎಂ ಪಣೋಲಿಬೈಲು, ಉಪಾಧ್ಯಕ್ಷರಾಗಿ ಉಮೇಶ್ ಕುಲಾಲ್ ಪಣೋಲಿಬೈಲು, ಕಾರ್ಯದರ್ಶಿಯಾಗಿ ಶ್ರೀ ರವಿರಾಜ್ ಕುಲಾಲ್, ಜತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೊಳಕೆ, ಲೆಕ್ಕಪರಿಶೋಧಕರಾಗಿ ನವೀನ್ ಕುಮಾರ್ ಪಣೋಲಿಬೈಲು, ಕೋಶಾಧಿಕಾರಿಯಾಗಿ ಬಾಲಕೃಷ್ಣ ಜಾಡಕೋಡಿ ಆಯ್ಕೆಯಾಗಿದ್ದಾರೆ. ರವಿರಾಜ್ ಕುಲಾಲ್ ವಂದಿಸಿದರು, ಜಲಂಧರ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ