Friday, September 20, 2024
ಕ್ರೀಡೆ

ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಎಂ.ಎಸ್‌.ದೋನಿ – ಕಹಳೆ ನ್ಯೂಸ್

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಮಹೇಂದ್ರ ಸಿಂಗ್‌ ದೋನಿ, ಬಿಲಿಯರ್ಡ್ಸ್‌ ಕ್ರೀಡಾಳು ಪಂಕಜ್‌ ಅಡ್ವಾನಿ ಸೇರಿದಂತೆ ವಿವಿಧ ರಂಗದ ಸಾಧಕರು, ಸಮಾಜ ಸೇವಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪದ್ಮ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಿದರು.

ದೋನಿ ಮತ್ತು ಪಂಕಜ್‌ ಅವರಿಗೆ ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 36ರ ಹರೆಯದ ಎಂ.ಎಸ್‌.ದೋನಿ ತಮಗೆ ಗೌರವ ಸೂಚಕವಾಗಿ ಬಂದಿರುವ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯ ಸಮವಸ್ತ್ರದಲ್ಲಿ ಗಮನ ಸೆಳೆದರು. ಏಳು ವರ್ಷಗಳ ಹಿಂದೆ ಏಪ್ರಿಲ್‌ 2ರಂದು ಮುಂಬೈನ ವಾಂಖೆಡೆ ಅಂಗಳದಲ್ಲಿ ದೋನಿ ನೇತೃತ್ವದ ತಂಡ ಕ್ರಿಕೆಟ್‌ ವಿಶ್ವಕಪ್‌ ಜಯಿಸಿತ್ತು.

ಜಾಹೀರಾತು

ರಾಜ್ಯದವರಾದ ಸಾಹಿತಿ ಡಾ.ದೊಡ್ಡರಂಗೇಗೌಡ ಮತ್ತು ಸಮಾಜ ಸೇವಕಿ ಸೀತವ್ವ ಜೋದತ್ತಿ ಅವರಿಗೆ ಇದೇ ಸಂದರ್ಭದಲ್ಲಿ ಪದ್ಮ ಶ್ರೀ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.