Friday, September 20, 2024
ಸುದ್ದಿ

ಗೋ ಸಂರಕ್ಷಣೆಯ ವಿಚಾರದಲ್ಲಿ ಇಲಾಖೆ ನಿರ್ಲಕ್ಷ್ಯ ತೋರಿದರೆ ಗೋ ಕಳ್ಳರನ್ನು ನಾವು ಅಟ್ಟಾಡಿಸುತ್ತೇವೆ – ಕಿಶೋರ್ ಕುಮಾರ್ ಪುತ್ತೂರು

ಕೈರಂಗಳ : ಗೋ ಶಾಲೆಯಲ್ಲಿ ಗೋ ಕಳ್ಳತನ ಮಾಡಿದ್ದು ಎಲ್ಲರಿಗೂ ತಿಳಿದಿದೆ ಈಗ, ಹಿಂದುಗಳ ಶ್ರದ್ಧಾ, ಭಕ್ತಿಯ ಸ್ವರೂಪವಾದ ಪರೋಪಕಾರಿ ಗೋಮಾತೆಯನ್ನು ಗೋಶಾಲೆಗೆ ನುಗ್ಗಿ ಮತಾಂಧ ಪುಡಾರಿಗಳು ಕಳ್ಳತನದಿಂದ ಕಡಿಯಲು, ಕದ್ದು ಸಾಗಿಸುವ ಮಟ್ಟಕ್ಕೆ ಬಂದುನಿಂತಿರೋ ಈ ಆಘಾತಕಾರೀ ಘಟನೆಯಿಂದ ಪ್ರತಿಯೊಬ್ಬ ಹಿಂದುವೂ ಎಚ್ಚತ್ತುಕೊಳ್ಳಬೇಕಾಗಿದೆ. ಇದು ಇಡೀ ಹಿಂದೂ ಸಮಾಜ ತಲೆತಗ್ಗಿಸಬೇಕಾದಂತಹಿ ಅಮಾನುಷ ಕೃತ್ಯ ಎಮನದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಅಮೃತಧಾರ ಗೋಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮತನಾಡಿದರು. ನಾಲ್ಕು ದಿನದಿಂದ ಅಮರಣಂತ ಉಪವಾಸ ಸತ್ಯಾಗ್ರಹದ ಮೂಲಕ ಸಾತ್ವಿಕ ವಿರೋಧವನ್ನು ವ್ಯಕ್ತಪಡಿಸುತ್ತಾ ಇದ್ದರೂ, ಸ್ಥಳೀಯ ‘ಕಾಂಗ್ರೇಸ್’ ನ ಲಜ್ಜೆಗೇಡಿ ಮುಖಂಡರ ದಿವ್ಯ ನಿರ್ಲಕ್ಷ ಇಡೀ ಹಿಂದೂ ಸಮಾಜವನ್ನು ರೊಚ್ಚಿಗೆಬ್ಬಿಸಲು, ದಂಗೆಯೇಳುವಂತೆ ಮಾಡಲು ಪ್ರೇರೇಪಿಸುತ್ತಿದೆ ಅನ್ನುವುದಕ್ಕೆ ಎರಡು ಮಾತಿಲ್ಲ. ಇಲಾಖೆ ನಿರ್ಲಕ್ಷ್ಯ ವಹಿಸಿದರೆ ಗೋಕಳ್ಳರನ್ನು ನಾವು ಅಟ್ಟಾಡುಸುತ್ತೇವೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

ಜಾಹೀರಾತು

ಎಂದಿಗೂ ಸಹ “ಬಹುಜನ ಹಿತಾಯ” ಎಂಬ ಧ್ಯೇಯವಾಕ್ಯಕ್ಕೆ ಮಾದರಿಯಾಗಿ ಮುಂದೆಯೂ ಸಹ ಹಿಂದೂಸಮಾಜದ ಪರವಾಗಿ ಜೊತೆಯಲ್ಲಿದ್ದಾರೆ.
ಈ ಸಂದರ್ಭದಲ್ಲಿ ಅವರಿಗೆ ಜೊತೆಯಾಗಿ
ಇವರೆಲ್ಲರ ಉಪಸ್ಥಿತಿಯಲ್ಲಿ ಹೋರಾಟದ ತೀವ್ರತೆಯನ್ನು ಹೆಚ್ಚಿಸುವ ಮೂಲಕ ಹಿಂದುವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಹಾಗೂ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ತನ್ಮೂಲಕ ಎಚ್ಚರಿಕೆಯನ್ನು ಕೊಡಲಾಗಿದೆ.