Saturday, February 15, 2025
ಹೆಚ್ಚಿನ ಸುದ್ದಿ

ಕಡಬ ತಾಲೂಕಿನ ಕಾಣಿಯೂರಿನಲ್ಲಿ ರಬ್ಬರ್ ಟ್ಯಾಪಿಂಗ್ , ಕೇರಳದಲ್ಲಿ ಹೈವೇ ದರೋಡೆ-ಕಹಳೆ ನ್ಯೂಸ್

ಕಾಣಿಯೂರು : ಕಡಬ ತಾಲೂಕಿನ ಕಾಣಿಯೂರಿನ ಸಹಕಾರಿ ಸಂಘವೊಂದರಲ್ಲಿ ಕೇರಳದಲ್ಲಿ ಹೈವೇ ದರೋಡೆಯಲ್ಲಿ ನಿರತವಾಗಿದ್ದ ದುಷ್ಕರ್ಮಿಗಳ ತಂಡ ಕದ್ದ ಚಿನ್ನಾಭರಣಗಳನ್ನೂ ಅಡಮಾನ ಇಟ್ಟಿರುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆ ಇದರ ಮಹತ್ವದ ತನಿಖೆಗೆ ಕೇರಳ ಪೋಲೀಸರ ತಂಡ ಆರೋಪಿಯ ಜತೆ ಕಾಣಿಯೂರಿನಲ್ಲಿರುವ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘಕ್ಕೆ ಮಾರ್ಚ್ 2 ರಂದು ಆಗಮಿಸಿದೆ. ಬಂಧಿತ ಆರೋಪಿ ಕೇರಳದ ನಿವಾಸಿ ರಾಜೀವ್ ಎಂದು ತಿಳಿದುಬಂದಿದೆ. ಹೆದ್ದಾರಿಯಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉನ್ಮೇಶ್ ಹಾಗೂ ಜೋಗಿ ಎಂಬವರು ಪರಾರಿಯಾಗಿದ್ದು ಇವರಿಗಾಗಿ ಪೊಲೀಸರು ಶೋಧ ನಡೆಸುತಿದ್ದಾರೆ. ಈ ಮೂವರು ಆರೋಪಿಗಳು ಕಾಣಿಯೂರಿನ ಮಠತ್ತಾರು ಎಂಬಲ್ಲಿ ರಬ್ಬರ್ ತೋಟ ಲೀಸ್ ಗೆ ಪಡೆದು ಟ್ಯಾಪಿಂಗ್ ನಡೆಸುತಿದ್ದರು. ಹಾಗಾಗಿ ಇಲ್ಲಿಯ ವಿಳಾಸ ನೀಡಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದರು. ಈ ಅಧಾರ್ ಕಾರ್ಡ್ ನ್ನು ವಿಳಾಸ ದಾಖಲೆಯಾಗಿ ನೀಡಿ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಕೃತ್ಯ ಕ್ಕೆ ಬಳಸಿದ ಚಾಕು ತಲುವಾರು ಇತ್ಯಾದಿ ಮಾರಾಕ ಯುದ್ದಗಳನ್ನೂ ಇಲ್ಲಿಯೇ ಬಿಸಾಡಿರುವ ಮಾಹಿತಿಯನ್ನೂ ಆ ದರೋಡೆಕೋರರು ತಿಳಿಸಿದ್ದು, ಸಹಕಾರಿ ಸಂಘದ ಹಿಂಬದಿ ಆರೋಪಿಗಳು ಬಿಸಾಡಿರುವ ಮಾರಕಾಸ್ತ್ರಗಳು ಪತ್ತೆಯಾಗಿದೆ. ಸದ್ಯ ಅದರ ಮಹಜರು ನಡೆಯುತ್ತಿದೆ ಎಂಬ ಮಾಹಿತಿಯೂ ಲಭಿಸಿದೆ. ಅಡವಿಟ್ಟ ಚಿನ್ನಾಭರಣಗಳ ಪರಿಶೀಲನೆ ನಡೆಯುತ್ತಿದ್ದೂ ಒಟ್ಟು ಚಿನ್ನದ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ