Friday, September 20, 2024
ಸುದ್ದಿ

ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರನಿಗೆ ಕಹಳೆ ನ್ಯೂಸ್ ನಿಂದ ಇಂದು ‘ ಸ್ವರಾಭಿಷೇಕ ‘ ; ‘ ಎಸ್.ಜಿ. ‘ ಶಂಕರ್ ಭಟ್ ,ಅರ್ಜುನ್ ಕಾಪಿಕಾಡ್ ಸೇರಿ ಹಲವು ಗಣ್ಯರು ಭಾಗಿ

ಪುತ್ತೂರು : ಹತ್ತೂರಿನ ಭಕ್ತರ ಆರಾಧ್ಯಮೂರ್ತಿ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಪ್ರಯುಕ್ತ ಇಂದು ಮಂಜಲಪಡ್ಪಿನಲ್ಲಿ ” ಸ್ವರಾಭಿಷೇಕ ” ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 7 ರಿಂದ ಮಂಜಲಪಡ್ಪು ಜನಾರ್ದನ ಸ್ವಾಮಿ ದೇವಸ್ಥಾನದ ದ್ವಾರದ ಬಳಿ ಕಹಳೆ ನ್ಯೂಸ್ ಅರ್ಪಿಸುವ ” ಸ್ವರಾಭಿಷೇಕ ಸಂಗೀತ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಮಾಜದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಿಂದು ಶಂಕರ ಭಟ್, ನಟ ಅರ್ಜುನ್ ಕಾಪಿಕಾಡ್, ಉದ್ಯಮಿ ಅಶೋಕ್ ಕುಮಾರ್ ರೈ, ಕಿಶೋರ್ ಕುಮಾರ್ ಪುತ್ತೂರು, ಚಂದ್ರ ಶೇಖರ ಕನ್ನಡ ಸೇನೆ, ನ್ಯಾಯವಾದಿ ಮಹೇಶ್ ಕಜೆ, ಯುವ ಮುಖಂಡರಾದ ಸಹಜ್ ರೈ, ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲು ಪಡೆಯಲಿದ್ದಾರೆ.

ಜಾಹೀರಾತು

ಗಾನಸಿರಿ ಕಿರಣ್ ಕುಮಾರ್ ಮತ್ತು ಬಳಗದರಿಂದ ವರ್ಣರಂಜಿತ ವೇದಿಕೆಯಲ್ಲಿ ಮಹಾಲಿಂಗೇಶ್ವರ ದೇವರಿಗೆ ಗಾಯನ ಸೇವೆ ನಡೆಯಲಿದೆ.

ವಿಶೇಷ ಆಕರ್ಷಣೆಯಾಗಿ ಡ್ಯಾನ್ಸ್ ಡ್ಯಾನ್ಸ್ ಖ್ಯಾತಿಯ ದೀಕ್ಷಾ ರೈ ಭಾಗವಹಿಸಲಿದ್ದಾರೆ.

ಸರಿಯಾಗಿ ಸಂಜೆ 7.00 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ.