Friday, September 20, 2024
ಸುದ್ದಿ

ಮೆಕ್ಕಾ ಮಸೀದಿ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಐವರ ಖುಲಾಸೆ – ಕಹಳೆ ನ್ಯೂಸ್

ಹೈದರಾಬಾದ್  (ಏ. 16):  ಮೆಕ್ಕಾ ಮಸೀದಿ ಬಾಂಬ್​ ಸ್ಫೋಟ​ ಪ್ರಕರಣದಲ್ಲಿ  ವಿಶೇಷ ತನಿಖಾ ತಂಡ  ಐವರನ್ನು  ಖುಲಾಸೆಗೊಳಿಸಿದೆ.  ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸ್ವಾಮಿ ಅಸೀಮಾನಂದ್, ದೇವೇಂದರ್ ಗುಪ್ತಾ, ಲೋಕೇಶ್ ಶರ್ಮಾ, ಲಕ್ಷ್ಮಣ್ ದಾಸ್ ಸೇರಿದಂತೆ 10 ಮಂದಿಯ ಮೇಲೆ  ಬಾಂಬ್ ಸ್ಫೋಟ  ಆರೋಪ ಕೇಳಿ ಬಂದಿತ್ತು.

ಹೈದರಾಬಾದ್’ನಲ್ಲಿರುವ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ  2007 ಮೇ 18 ರಂದು ಶುಕ್ರವಾರದ ನಮಾಜ್ ವೇಳೆ  ಬಾಂಬ್ ಸ್ಫೋಟಗೊಂಡು 8 ಮಂದಿ ಮೃತಪಟ್ಟಿದ್ದರು.  58 ಮಂದಿ ಗಾಯಗೊಂಡಿದ್ದರು.  ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಫೈರಿಂಗ್ ಮಾಡಿದ  ವೇಳೆ ಐವರು ಮೃತಪಟ್ಟಿದ್ದರು.