Friday, September 20, 2024
ರಾಜಕೀಯ

ಸೋಲಿನ ಭೀತಿಯಲ್ಲಿ ಜೆ.ಆರ್.ಲೋಬೊ ವಿರುದ್ದ ವಾಮಚಾರ ಮಾಡಿಸಿದ್ರಾ ವೇದವ್ಯಾಸ್ ಕಾಮತ್ ? – ಕಹಳೆ ನ್ಯೂಸ್

ಮಂಗಳೂರು, ಮೇ 3: ಜೆ.ಆರ್.ಲೋಬೊ ವಿರುದ್ದ ನಂದಿಗುಡ್ಡ ಹಿಂದೂ ರುದ್ರಭೂಮಿಯಲ್ಲಿ ಮಾಟ ಮಂತ್ರ ಪ್ರಯೋಗಿಸಲಾಗಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ನಂದಿಗುಡ್ಡದ ರುದ್ರಭೂಮಿಯಲ್ಲಿ ಏ. ೦3 ರ ಗುರುವಾರ ವಾಮಚಾರದ ಕುರುಹು ಪತ್ತೆಯಾಗಿದೆ.

ಸುಮಾರು 10 ದಿನಗಳ ಹಿಂದೆ ಇಲ್ಲಿ ಶಾಸಕ ಲೋಬೋಗೆ ವಾಮಚಾರ ಮಾಡಲಾಗಿದೆ ಎಂಬ ಮಾಹಿತಿ ಕಾಂಗ್ರೆಸ್ಸಿಗರಿಗೆ ದೊರಕಿದ್ದು ಇದಕ್ಕಾಗಿ ನಂದಿಗುಡ್ಡದ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮದ್ಯೆ ಇಂದು ಮಾಟಮಂತ್ರದ ಕುರುಹು ಪತ್ತೆಯಾಗಿದೆ. ಇದನ್ನು ಕಂಡ ಕಾವಲುಗಾರರು ಮತ್ತು ಕೂಲಿಯಾಳುಗಳು ಕಾಂಗ್ರೆಸ್ಸಿಗರ ಗಮನ ಸೆಳೆದಿದ್ದರು. ಅದರಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸೋಲಿನ ಭೀತಿಯಲ್ಲಿ ಜೆ.ಆರ್.ಲೋಬೊ ವಿರುದ್ದ ವಾಮಚಾರ ಮಾಡಿಸಿದ್ರಾ ವೇದವ್ಯಾಸ್ ಕಾಮತ್ ಎಂಬ ಅನುಮಾನವನ್ನು ಸೇರಿದ್ದ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಬಳಿಕ ಮಾತನಾಡಿದ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ನನಗೆ ಏ. 23 ರಂದು ಮಾಹಿತಿ ಲಭಿಸಿ ನಾನೂ ಇದಕ್ಕಾಗಿ ಹುಡುಕಾಡಿದ್ದೆ. ಆದರೆ ಯಾವುದೇ ವಸ್ತುಗಳು ಲಭ್ಯವಾಗಿರಲಿಲ್ಲ. ಆದರೆ ಇಂದು ಮಾಟಮಂತ್ರಕ್ಕೆ ಸಂಬಂಧಿಸಿ ವಸ್ತುಗಳು ಪತ್ತೆಯಾಗಿದೆ. ಈ ಮಾಟಮಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ನಾನು ಕಾಲಿನಿಂದ ತುಳಿದಿದ್ದು, ಇದನ್ನು ತುಳಿದರೆ ಏನೂ ಸಂಭವಿಸುದಿಲ್ಲ ಎಂಬುದರ ಬಗ್ಗೆ ಜನರಲ್ಲಿ ಪ್ರಜ್ಞೆ ಹುಟ್ಟಿಸಬೇಕಿದೆ ಎಂಬ ಸಂದೇಶ ರವಾನಿಸುವ ಸಲುವಾಗಿ ಹೀಗೆ ನಡೆದುಕೊಂಡಿದ್ದೇನೆ ಎಂದರು.
ಬಳಿಕ ಮಾತನಾಡಿದ ಪಾಲಿಕೆ ಸದಸ್ಯ, ಪ್ರಕಾಶ್ , ‘ಶಾಸಕರ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದ ವಿಪಕ್ಷಗಳು ಅಡ್ಡದಾರಿಯ ತಂತ್ರಗಾರಿಕೆ ಮಾಡುತ್ತಿದೆ. ಆದರೆ ಇವುಗಳ ಬಗ್ಗೆ ಜೆ.ಆರ್.ಲೋಬೊ ಅವರಿಗೆ ನಂಬಿಕೆ ಇಲ್ಲ ನಂದಿಗುಡ್ಡದ ರುದ್ರಭೂಮಿಗಾಗಿ ಲೋಬೋ ಶ್ರಮಿಸಿದ್ದು, ಅವರ ಒಳ್ಳೆಯತನವೇ ಅವರನ್ನು ಕಾಪಾಡುತ್ತದೆ’ ಎಂದಿದ್ದಾರೆ.