Thursday, April 10, 2025
ಸುದ್ದಿ

‘ಎಲೆಕ್ಷನ್ ಸ್ಪೆಷಲ್’ ಮತದಾರರಿಗೆ ನಾಳೆ ಉಚಿತವಾಗಿ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ – ಕಹಳೆ ನ್ಯೂಸ್

ಮಂಗಳೂರು, ಮೇ 11: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆ ಮತದಾರರಿಗೆ ಉಚಿತವಾಗಿ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದು, ಮೇ 12 ರಂದು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್ಆರ್‌ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ‘ಎಲೆಕ್ಷನ್ ಸ್ಪೆಷಲ್’ ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ  ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. ಬಸ್ಸುಗಳ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಒಟ್ಟು 160 ಕೆಎಸ್ಆರ್‌ಟಿಸಿಯ ಬಸ್ಸುಗಳು ಸಂಚಾರ ನಡೆಸಲಿವೆ. ಮೇ. 12ರ ಮತದಾನದ ದಿನ ಬೆಳಗ್ಗೆಯಿಂದ ಸಂಜೆ ತನಕ ಈ ಬಸ್ಸುಗಳು ಮೂರು ಟ್ರಿಪ್‌ಗಳಲ್ಲಿ ಸಂಚಾರವನ್ನು ನಡೆಸಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮತದಾನ ಮಾಡಲು ಆಗಮಿಸುವ ಜನರು ‘ಎಲೆಕ್ಷನ್ ಸ್ಪೆಷಲ್’ ಎಂಬ ಹೆಸರಿನ ನಾಮಫಲಕ ಹೊಂದಿರುವ ಸರ್ಕಾರಿ ಬಸ್ಸುಗಳ್ಲಲಿ ವೋಟರ್ ಐಡಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ