Friday, September 20, 2024
ರಾಜಕೀಯ

ಜಯನಗರದ ಬಿಜೆಪಿ ಅಭ್ಯರ್ಥಿಗಾಗಿ ಯುವಕರ ಹುಡುಕಾಟದಲ್ಲಿ ಹೈಕಮಾಂಡ್! ವಿಜಯಕುಮಾರ್ ಸ್ಥಾನ ತುಂಬಿಸಬಲ್ಲ ಸಮರ್ಥರು ಯಾರು? – ಕಹಳೆ ನ್ಯೂಸ್

ಜಯನಗರ : ಜನಪ್ರಿಯ ನಾಯಕ ವಿಜಯ್ ಕುಮಾರ್ ಅವರ ಸಾವಿನಿಂದಾಗಿ ನಿಂತಿದ್ದ ಜಯನರಗದಲ್ಲಿ ಮತ್ತೆ ಮರುಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್ ತೊಡಗಿದೆ.

ಯುವನಾಯಕರಿಗೆ ಆದ್ಯತೆ ಕೊಡಬೇಕು ಎಂಬ ಕೂಗು ಕ್ಷೇತ್ರದ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದ್ದು, ಯುವನಾಯನ ಹುಡುಕಾಟದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ವಿಜಯಕುಮಾರ್ ಅವರು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ಅವರನ್ನು ಸ್ಥಾನವನ್ನು ತುಂಬುವ ಸಾಮರ್ಥ್ಯ ಹೊಂದಿದ ನಾಯಕನ ಅವಶ್ಯಕತೆ ಬಿಜೆಪಿಗೆ ಇದೆ. ಈ ನಿಟ್ಟಿನಲ್ಲಿ ಅಂತಹ ಸಮರ್ಥ ನಾಯಕ ಯಾರು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಅಭ್ಯರ್ಥಿ ರೇಸ್ ನಲ್ಲಿ ಯಾರು ಯಾರು ಇದ್ದಾರೆ?

ಈಗಾಗಲೇ ಅನೇಕ ನಾಯಕರು ವಿಜಯಕುಮಾರ್ ಮರಣಾ ನಂತರ ತಮ್ಮ ಇರುವಿಕೆಯನ್ನು ಕ್ಷೇತ್ರದಲ್ಲಿ ಹೆಚ್ಚಿಸುತ್ತಿದ್ದು, ತಾವು ಆಕಾಂಕ್ಷಿಗಳು ಎಂಬುದನ್ನು ಪರೋಕ್ಷವಾಗಿ ತೋರಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ರೇಸ್ ನಲ್ಲಿ ಪ್ರಮುಖವಾಗಿ ನಾಲ್ಕು ಹೆಸರು ಕೇಳಿ ಬರುತ್ತಿದ್ದು ಮಾಜಿ ಮೇಯರ್ ಎಸ್. ಕೆ. ನಟರಾಜ್, ಮಾಜಿ ಕಾರ್ಪೋರೇಟರ್ ಸಿ.ಕೆ. ರಾಮಮೂರ್ತಿ, ಹಾಲಿ ಕಾರ್ಪೋರೇಟರ್ ನ. ನಾಗರಾಜ್ ಪ್ರಮುಖವಾಗಿದ್ದರೂ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಆರ್.ಎಸ್.ಎಸ್. ಹಿರಿಯರು, ಬಿಜೆಪಿ ಹಿರಿಯ ನಾಯಕರು ಬಿಜೆಪಿಯ ಕಾರ್ಯಕರ್ತ ಸಮಾಜಸೇವಕ ಯುವ ಉತ್ಸಾಹಿಯಾದ ಜಯನಗರ ಮನೋಜ್ ಎಂದೇ ಪ್ರಸಿದ್ಧಿ ಪಡೆದ ಮನೋಜ್ ಕಡೆ ಒಲವು ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ.

ಎಲ್ಲವೂ ಸರಿಯಾಗಿದ್ದರೆ ಮನೋಜ್ ಅವರನ್ನೇ ಫೈನಲ್ ಮಾಡುವುದು ಖಚಿತ.