Recent Posts

Sunday, September 22, 2024
ಬಂಟ್ವಾಳ

ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಸ್ವಸ್ತರಾದ ಗೋಪಾಲನಾಥರ ಪತ್ನಿ; ಪ್ರಥಮ ಚಿಕಿತ್ಸೆ ನೀಡಿದ ಡಿ.ಸಿ.– ಕಹಳೆ ನ್ಯೂಸ್

ಬಂಟ್ವಾಳ : ಸ್ಯಾಕ್ಸೋಫೋನ್ ಚಕ್ರವರ್ತಿ, ಪದ್ಮಶ್ರೀ ಪುರಸ್ಕøತ ಡಾ. ಕದ್ರಿ ಗೋಪಾಲನಾಥ್ ಅವರ 2 ನೇ ವರ್ಷದ ಪುಣ್ಯಸ್ಮರಣೆದ ಅಂಗವಾಗಿ “ಕದ್ರಿ ಸಂಗೀತ ಸೌರಭ 2021” ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ವೇದಿಕೆಯ ಎದುರು ಕುಳಿತಿದ್ದ ಡಾ. ಕದ್ರಿ ಗೋಪಾಲನಾಥ್ ಅವರ ಪತ್ನಿ ಭಾವುಕರಾಗಿ ಅಸ್ವಸ್ಥರಾದ ಘಟನೆ ಸಜೀಪದ ಮಿತ್ತಮಜಲಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ಪತ್ನಿ ಸರೋಜಿನಿ ಅವರ ಆರೋಗ್ಯ ಏರು ಪೇರಾಗುತ್ತಿದ್ದಂತೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವೈದ್ಯರೂ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ಡಾ. ರಾಜೇಂದ್ರ ಕೆ.ವಿ .ಅವರು ಸ್ಥಳದಲ್ಲೇ ಚಿಕಿತ್ಸೆ ನೀಡಿ ತತ್ ಕ್ಷಣಕ್ಕೆ ನೆರವಾದರು.ಆ ಬಳಿಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸರೋಜಿನಿ ಅವರ ಬಿಪಿ, ಶುಗರ್ ಮತ್ತು ಇಸಿಜಿ ಮಾಡಿಸುವಂತೆ ಸೂಚಿಸಿದ್ದಾರೆ.

ಜಾಹೀರಾತು

‘ಸಂಗೀತ ಸೌರಭ’ ಕಾರ್ಯಕ್ರಮ ಸಣ್ಣ ಆತಂಕದ ನಡುವೆಯೂ ಸಾಂಗವಾಗಿ ಮುಂದುವರೆದಿದ್ದು, ಸರೋಜಿನಿ ಅವರು ಸಣ್ಣ ಮಟ್ಟಿನ ಆರೋಗ್ಯ ಏರು ಪೇರಾಗುತ್ತಿದ್ದಂತೆ ಚೇತರಿಸಿಕೊಂಡಿದ್ದಾರೆ.

ವೈದ್ಯಕೀಯ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿಗಳ ಸಹಾಕಾರಕ್ಕೆ ಕದ್ರಿ ಅವರ ಪುತ್ರ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಅವರು ಧನ್ಯವಾದ ಸಲ್ಲಿಸಿದ್ದಾರೆ.