Friday, September 20, 2024
ಸುದ್ದಿ

ಖ್ಯಾತ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರಿಗೆ ಭಾರತ ವಿಕಾಸರತ್ನ ಪ್ರಶಸ್ತಿ – ಕಹಳೆ ನ್ಯೂಸ್

ಮಂಗಳೂರು : ಭಾರತ ರತ್ನ ಸರ್. ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಕಾರದೊಂದಿಗೆ ದಿನಾಂಕ 25 ಶುಕ್ರವಾರದಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆಯುವ “ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 9ನೇ ಸಮ್ಮೇಳನ” ದಲ್ಲಿ ಕೊಡಮಾಡುವ “ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿಯನ್ನು ” ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತ್ತಿಸಿ ಖ್ಯಾತ ಸಂಪಾದಕಿ ಶ್ರೀಮತಿ “ಮಾಲತಿ ಶೆಟ್ಟಿ ಮಾಣೂರು” ಅವರನ್ನು ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಲತಿ ಶೆಟ್ಟಿಯವರು ” ಕರುನಾಡ ಸಿರಿ” ರಾಜ್ಯಪ್ರಶಸ್ತಿ ಪುರಸ್ಕೃತ , “ಅಮೃತ ಪ್ರಕಾಶ ಪತ್ರಿಕೆ”ಯ ವ್ಯವಸ್ಥಾಪಕ ಸಂಪಾದಕಿಯಾಗಿ ಅವರು ತಮ್ಮ ಸಾಧನೆಯನ್ನು ಮರೆದಿದ್ದಾರೆ. ಇದನ್ನು ಗುರಿತಿಸಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಜಾಹೀರಾತು