Recent Posts

Sunday, September 22, 2024
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಐಕ್ಯುಎಸಿ ಘಟಕ ಮತ್ತು ಆಂಗ್ಲ ವಿಭಾಗದ ಸಹಯೋಗದಲ್ಲಿ ಲಿಟರರಿ ಕ್ಲಬ್ ಆಯೋಜಿಸಿದ ಸ್ಕ್ರಿಪ್ಟ್ ರೈಟಿಂಗ್ ಹಾಗೂ ಆ್ಯಕರಿಂಗ್ ಕುರಿತಾದ ಕಾರ್ಯಗಾರ – ಕಹಳೆ ನ್ಯೂಸ್

ಪುತ್ತೂರು: ಬರವಣಿಗೆಯ ಅನ್ನೋದು ಓದುಗರನ್ನು ಆಕರ್ಷಿಸುವಂತಿರಬೇಕು ಹಾಗಾಗಿ ನಾವು ಆಯ್ಕೆ ಮಾಡಿಕೊಳ್ಳುವಂತಹ ವಿಷಯ ಅರ್ಥಪೂರ್ಣವಾಗಿ ಮತ್ತು ಕೊನೆಯ ತನಕ ಓದುವಂತಿರಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಹಾಗೂ ಕಾಲೇಜಿನ ಸ್ನಾತಕೋತ್ತರ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀ ಪ್ರಿಯ ಪಿ. ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವಿವೇಕಾನಂದ ಕಾಲೇಜಿನ ಐಕ್ಯುಎಸಿ ಘಟಕ ಮತ್ತು ಆಂಗ್ಲ ವಿಭಾಗದ ಸಹಯೋಗದಲ್ಲಿ ಲಿಟರರಿ ಕ್ಲಬ್ ಆಯೋಜಿಸಿದ ಸ್ಕ್ರಿಪ್ಟ್ ರೈಟಿಂಗ್ ಹಾಗೂ ಆ್ಯಕರಿಂಗ್ ಕುರಿತಾದ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ನಮ್ಮ ಬರವಣಿಗೆಯಿಂದ ಉತ್ತಮ ಮಾಹಿತಿ ಮತ್ತು ಜ್ಞಾನ ಸಿಗುವಂತಿರಬೇಕು ಬದಲಿಗೆ ಯಾರಿಗೂ ತಪ್ಪು ಮಾಹಿತಿಗಳು ನೀಡುವಂತಿರಬಾರದು. ಬರವಣಿಗೆಯಲ್ಲಿ ಭಾಷಾಬಳಕೆ, ವ್ಯಾಕರಣ, ಪದಬಳಕೆ, ಬಹಳ ಮುಖ್ಯವಾಗುವುದು ಎಂದು ಸ್ಕ್ರಿಪ್ಟ್ ರೈಟಿಂಗ್ ಬಗ್ಗೆ ಮಾಹಿತಿಗಳನ್ನು ನೀಡಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಸ್ನಾತಕೋತ್ತರ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮಾತನಾಡಿ ನಿರೂಪಣೆಗೆ ಭಾಷೆ ಶುದ್ಧತೆ ಮತ್ತು ಜ್ಞಾನ ಇರಬೇಕು. ಭಾಷಾ ಶುದ್ಧತೆಗೆ ಪುಸ್ತಕಗಳನ್ನು ಓದುವುದು ಬಹಳ ಮುಖ್ಯ, ಪುಸ್ತಕಗಳನ್ನು ಓದಿದಷ್ಟು ಪದಗಳ ಬೇರೆ ಬೇರೆ ಅರ್ಥಗಳು ಮತ್ತು ಜ್ಞಾನ ಸಿಗುವುದು.

ನಿರೂಪಣೆಯಲ್ಲಿ ತಪ್ಪುಗಳಾಗುವುದು ಸಹಜ ಆದರೆ ತಪ್ಪುಗಳು ಏನಾಗಿವೆ ಎಂದು ತಿಳಿದು ಅದನ್ನು ಸರಿಪಡಿಸಿದರೆ ಉತ್ತಮ ನಿರೂಪಕಿಯಾಗಲು ಸಹಾಯವಾಗುವುದು ಎಂದರು. ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್. ಮಾತನಾಡಿ, ಮಾತೇ ಮಾಣಿಕ್ಯ ಹಾಗಾಗಿ ನಮ್ಮ ಮಾತುಗಳು ಭಾವನೆಗಳಿಂದ ತುಂಬಿರಬೇಕು ಅದು ಬರವಣಿಗೆಯಲ್ಲಿ ಮೂಡಿಬರಬೇಕು. ಮರದ ಬೇರು ಭೂಮಿಯ ಆಳಕ್ಕೆ ಹೋದಹಾಗೆ ಮರಗಳು ದೊಡ್ಡದಾಗಿ ಬೆಳೆಯುತ್ತವೆ ಹಾಗೆಯೇ ನಮ್ಮ ಪ್ರಯತ್ನ ಎಷ್ಟು ಆಳವಾಗಿರುವುದೋ ಅಷ್ಟೇ ದೊಡ್ಡ ಸಾಧನೆಯನ್ನು ಮಾಡಬಹುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಕೆಲಸ ಅನ್ನೋದು ನಮ್ಮನ್ನು ನಾವು ಮರಿಕೊಳ್ಳುವಂತಿರಬಾರದು. ಆತ್ಮತೃಪ್ತಿಗಾಗಿ ಕೆಲಸಗಳನ್ನು ಮಾಡಬೇಕು. ನಮ್ಮ ಅಭಿರುಚಿ ಮತ್ತು ಆಸಕ್ತಿಗಳನ್ನು ನಾವು ಹೆಚ್ಚಿಸಿಕೊಳ್ಳಬೇಕು ಎಂದು ನುಡಿದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕಿ ಅಂಬಿಕಾ, ಸರಸ್ವತಿ ಸಿ.ಕೆ, ಸೌಂದರ್ಯ ಉಪಸ್ಥಿತರಿದ್ದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಪೌರ್ಣಿಕ ಪ್ರಾರ್ಥಿಸಿ, ಸ್ಪೂರ್ತಿ ಸ್ವಾಗತಿಸಿದರು. ವಾಗ್ದೇವಿ ವಂದಿಸಿ, ಧನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.