Recent Posts

Sunday, September 22, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದಿಂದ ಇ-ಶ್ರಮಿಕ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಎಪಿಯಲ್ ರೇಷನ್ ಕಾರ್ಡ್ ನವೀಕರಣ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದ ವತಿಯಿಂದ ಇ-ಶ್ರಮಿಕ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಎಪಿಯಲ್ ರೇಷನ್ ಕಾರ್ಡ್ ನವೀಕರಣ ಕಾರ್ಯಕ್ರಮ ಡಿ.16ರಂದು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಸಹಕಾರ ಜ್ಯೋತಿ ಸಭಾಭವನದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

‘ಸಹಕಾರ ಜ್ಯೋತಿ ಸಭಾಭವನದಲ್ಲಿ ‘ಸರ್ಕಾರದ ಯೋಜನೆಯ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮ ನಡೆದಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಎಸ್.ಡಿ.ಪಿ. ಸಂಸ್ಥೆಯ ಪಾಲುದಾರರಾದ ರೂಪಲೇಖ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಇವರು ಮಹಿಳಾ ಮೋರ್ಚಾ ಎತ್ತಿಕೊಂಡಿರುವ ಎಲ್ಲ ಜನಸೇವಾ ಕಾರ್ಯಗಳೂ ಶ್ಲಾಘನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ರು.Video ಉಪ್ಪಿನಂಗಡಿಯಲ್ಲಿ ಕ್ರೌರ್ಯ ಮೆರೆದ ಎಸ್‍ಡಿಪಿಐ ಪಿಎಫ್‍ಐ: ಕಾರ್ಯನಿರತ ಪೊಲೀಸರ ಮೇಲೆ ನರಹಂತಕರಂತೆ ದಾಳಿ ಎಷ್ಟು ಸರಿ..?

ಬಿ.ಜೆ.ಪಿ. ಪುತ್ತೂರು ಮಹಿಳಾ ಮೋರ್ಚದ ಅಧ್ಯಕ್ಷರಾದ ಶರಾವತಿ ರವಿನಾರಾಯಣ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ಮ.ಮೋ.ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಪೆರುವೋಡಿ , ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಪ್ರಭಾ ಆಚಾರ್ಯ, ಜಿಲ್ಲಾ ಕಾರ್ಯದರ್ಶಿಗಳಾದ ಜಯಂತಿ ನಾಯಕ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರೆಯತ್ತೋಡಿ , ಮಂಡಲ ಮ.ಮೋ.ದ ಸಹ ಪ್ರಭಾರಿಗಳಾದ ಅರ್ಪಣ ಪಡೀಲ್, ಸಾಕ್ಷಿ ಕಮ್ಯುನಿಕೇಶನ್ ಸಿಬ್ಬಂದಿ ಸುಪ್ರೀತ, ಮ.ಮೋ.ದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ನಾಯಕ್ ಪ್ರಭಾವತಿ , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.