Recent Posts

Saturday, September 21, 2024
ದಕ್ಷಿಣ ಕನ್ನಡಸುದ್ದಿ

ಉದ್ಘಾಟನೆಗೊಂಡ ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಶರ್ಬತ್ ಕಟ್ಟೆಯಿಂದ ಗುಂಡಳಿಕೆ ತೆರಳುವ ನೂತನ ಕಾಂಕ್ರೀಟ್ ರಸ್ತೆ –ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಶರ್ಬತ್ ಕಟ್ಟೆಯಿಂದ ಗುಂಡಳಿಕೆ ತೆರಳುವ ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಶರ್ಬತ್ ಕಟ್ಟೆಯಿಂದ ಗುಂಡಳಿಕೆ ತೆರಳಲು ಸಮರ್ಪಕವಾದ ರಸ್ತೆಯಿಲ್ಲದೆ ಪ್ರಮುಖ ರಸ್ತೆ ಪದವಿನಂಗಡಿಯ ಮೂಲಕ ತೆರಳಬೇಕಿತ್ತು. ಈ ರಸ್ತೆ ನಿರ್ಮಾಣದಿಂದ ಇಲ್ಲಿನ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ಸ್ಥಳೀಯ ಕಾರ್ಪೋರೇಟರ್ ಶಕಿಲಾ ಕಾವಾ, ಗುಂಡಳಿಕೆ ತೆರಳಲು ಸಮರ್ಪಕ ರಸ್ತೆಯಿಲ್ಲದೆ ಈ ಪರಿಸರದ ಜನರು ಪ್ರತಿನಿತ್ಯ ಸಂಕಷ್ಟ ಪಡುತಿದ್ದರು. ಸಾರ್ವಜನಿಕರ ಬೇಡಿಕೆಯಂತೆ ಶಾಸಕರ ಬಳಿ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಲಾಗಿದ್ದು ಶಾಸಕರ ಮುತುವರ್ಜಿಯಿಂದ ಗುಂಡಳಿಕೆ ಪ್ರದೇಶಕ್ಕೆ ಉತ್ತಮ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು.

ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಶಕಿಲಾ ಕಾವಾ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು,ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ, ರಾಮಕೃಷ್ಣ, ಪ್ರಸನ್ನ, ಪ್ರವೀಣ್ ಗುಂಡಳಿಕೆ, ವಸಂತ್ ಜೆ ಪೂಜಾರಿ, ಗಾಯತ್ರಿ, ನಯನ ವಿಶ್ವನಾಥ, ಸಂತೋಷ್ ನಂತೂರು, ವೆಂಕಟೇಶ ಕದ್ರಿ, ಕಮಲಾಕ್ಷಿ, ಶ್ರೀಧರ್ ಶೆಟ್ಟಿ, ಶಿಲ್ಪ ಕಂಡೆಟ್ಟು, ರೋಶನಿ ಗುಂಡಳಿಕೆ, ಲಕ್ಷ್ಮಿ ಗುಂಡಳಿಕೆ, ವಸಂತ್ ಗುಂಡಳಿಕೆ, ದಿವಾಕರ್ ಶೆಣೈ, ಅಜಿತ್ ಗುಂಡಳಿಕೆ, ಹರೀಶ್ ಗುಂಡಳಿಕೆ, ನವೀನ್ ಗುಂಡಳಿಕೆ, ವೆಂಕಟ್ ಗುಂಡಳಿಕೆ, ಚಿನ್ನಪ್ಪ, ಹರಿಣಾಕ್ಷ ಗುಂಡಳಿಕೆ, ಜಯ ಪ್ರಭ, ಕೂಸಪ್ಪ, ಶೀನ, ಕಾಲೇಜಿನ ಪ್ರಮುಖರಾದ ಬಾಲಕೃಷ್ಣ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.