Recent Posts

Saturday, September 21, 2024
ಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ಮಾನ್ವಿತಾ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕೇತ್ರಕ್ಕೆ ಟಗರು ಸಿನಿಮಾ ನಾಯಕಿ ನಟಿ ಮಾನ್ವಿತಾ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ನಟಿ ಮಾನ್ವಿತ ‘ತುಂಬಾ ಜನರಿಗೆ ನಾನು ಮಂಗಳೂರಿನವಳು ಎಂಬುದು ಗೊತ್ತಿಲ್ಲ, ತುಳು ಭಾಷೆಯಲ್ಲಿ ಒಳ್ಳೆಯ ಚಿತ್ರ ಕಥೆ ಸಿಕ್ಕರೆ ನಟಿಸಲು ಸಿದ್ಧಳಿದ್ದೇನೆ’ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

‘ಹೈದರಾಬಾದ್‌ನಲ್ಲಿ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದೇನೆ. ಒಳ್ಳೆಯ ಕನ್ನಡ ಚಿತ್ರಗಳ ನಿರ್ಮಿಸುವ ಗುರಿ ಇದೆ ಅದಕ್ಕಾಗಿ ದೇವರ ಆಶೀರ್ವಾದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಅಭಿನಯದ ಮರಾಠಿ ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗುವ ಸಾಧ್ಯತೆಯಿದೆ. ಕೋವಿಡ್‌ನಿಂದಾಗಿ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ’ ಎಂದು ಹೇಳಿದರು.