Recent Posts

Saturday, September 21, 2024
ದಕ್ಷಿಣ ಕನ್ನಡಸುದ್ದಿ

30 ಲಕ್ಷ ವೆಚ್ಚದಲ್ಲಿ ಕಾಟಿಪಳ್ಳ 3ನೇ ವಾರ್ಡ್ ಅಭಿವೃದ್ದಿಗಾಗಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಡಾ.ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ 3 ರ ಸಮಗ್ರ ಅಭಿವೃದ್ದಿಗಾಗಿ 30 ಲಕ್ಷದ ಕಾಮಗಾರಿಗೆ ಶಾಸಕರಾದ ಡಾ.ಭರತ್ ಶೆಟ್ಟಿ ಮತ್ತು ಮ.ನ.ಪಾ. ಸದಸ್ಯರು ಮತ್ತು ಪಟ್ಟಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆಯವರ ಉಪಸ್ಥಿತಿಯಲ್ಲಿ 3ನೇ ಬ್ಲಾಕ್ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ಆಶ್ರಯ ಕಾಲನಿ ಕೂಡು ರಸ್ತೆ ಮತ್ತು ಬೊಳ್ಳಾಜೆ ಯಿಂದ ಕೊಡ್ಡಬ್ಬು ಭಂಡಾರ ಮನೆ ಬಳಿ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಈ ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರ ಪ್ರ. ಕಾ. ದಿನಕರ್ ಇಡ್ಯಾ, ಮಂಡಲ ಉಪಾಧ್ಯಕ್ಷರು ಜಯಕುಮಾರ್ ಗಣೇಶಪುರ, ಎಸ್.ಸಿ. ಮೋರ್ಚಾದ ಮ. ಪ.ಕಾ. ಹರೀಶ್, ಮಹಿಳಾ ಮೋರ್ಚಾದ ಮ. ಕಾ. ಶೈಲಜಾ, ಅಲ್ಪಸಂಖ್ಯಾತರ ಮೋರ್ಚಾದ ಕಬೀರ್ ಕಾಟಿಪಳ್ಳ , ರೇಷ್ಮಾ, ಶಕ್ತಿ ಕೇಂದ್ರ ಪ್ರಮುಖರಾದ ಬಾಲಕೃಷ್ಣ ಸುವರ್ಣ, ಸಹಪ್ರಮುಖ್ ಗಣೇಶ್ ,ದೀಕ್ಷಿತ್, 3ನೇ ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು