Recent Posts

Saturday, September 21, 2024
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಯಕ್ಷದೇವ ಮಿತ್ರ ಕಲಾ ಮಂಡಳಿ ವತಿಯಿಂದ ಎಸ್.ಕೆ.ಎಫ್ ಬೊಯ್ದರ್ ಆಂಡ್ ಡ್ರೈಯರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಮೋದ್ ಕುಮಾರ್ ಅವರಿಗೆ ಸನ್ಮಾನ- ಕಹಳೆ ನ್ಯೂಸ್

ಮೂಡಬಿದಿರೆ: ಶ್ರೀಯಕ್ಷದೇವ ಮಿತ್ರ ಕಲಾ ಮಂಡಳಿಯ 24ನೇ ವರುಷದ ಸಂದರ್ಭ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಬೆಳುವಾಯಿ ಬನ್ನಡ್ ಎಸ್.ಕೆ.ಎಫ್ ಬೊಯ್ದರ್ ಆಂಡ್ ಡ್ರೈಯರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ಯಕ್ಷದೇವ ಮಿತ್ರ ಕಲಾ ಮಂಡಳಿ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.


ಬಳಿಕ ಮಾತನಾಡಿದ ಯಕ್ಷದೇವ ಮಿತ್ರ ಕಲಾ ಮಂಡಳಿಯ ಸ್ಥಾಪಕಾಧ್ಯಕ್ಷ ಎಂ. ದೇವಾನಂದ ಭಟ್ ಬೆಳುವಾಯಿ 25ನೇ ವರುಷಾಚರಣೆಯ ವಿಶೇಷ ಸಂದರ್ಭವನ್ನು ಮುಂದೆ 25 ಶಾಲಾ ಕಾಲೇಜುಗಳಲ್ಲಿ ನೆರವೇರಿಸುವ ಆಯೋಜನೆಯ ಬಗ್ಗೆ ವಿವರಣೆ ನೀಡಿದರು. ಎಸ್.ಕೆ.ಎಫ್, ಸಂಸ್ಥೆಯೂ ಕಲೆ, ಸಂಸ್ಕøತಿ, ಕ್ರೀಡೆ, ಹಾಗೂ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಅನೇಕ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸಹಕಾರಿಯಾಗಿ ತೊಡಗಿಸಿಕೊಂಡು ಬಂದ ಸಂಸ್ಥೆಯಾಗಿದೆ. ಯಕ್ಷದೇವದ ಮುಂದಿನ ನಡೆಗಳಿಗೆ ಸಂಸ್ಥೆಯು ಸಹ ಕರಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ ಸದಸ್ಯರಾದ ಹರೀಶ್ ಎಂ. ಬಂಗೇರ, ಯುವರಾಜ್ ಹೆಗ್ಡೆ ಕಲ್ಲೋಳಿ, ಮಧು ಶ್ರೀಯಕ್ಷದೇವ ಭಟ್ ಬೆಳುವಾಯಿ, ಓಪರೇಶನ್ ಡೈರೆಕ್ಟರ್ ಜಿತೇಂದ್ರ ಕನ್ನುಂಗ, ಚೀಫ್ ಎಕ್ಸಿಕ್ಯುಟಿವ್ ಅಫೀಸರ್ ಸುಮನ್ ಮುಖರ್ಜಿ, ಚೀಫ್ ಟೆಕ್ನಿಕಲ್ ಆಫೀಸರ್ ಗ್ಯಾಸ್ ರಂಜನ್ ಮಲ್ಲಿಕ್, ಸರ್ವಿಸ್ ಮೈನೆಜರ್ ನಾಗರಾಜ್, ಎಕೌಂಟ್ ಮೆನೆಜರ್ ಪ್ರಸನ್ನ ಉಡುಪ, ಹೆಚ್. ಆರ್. ಮೆನೆಜರ್ ವಿವೇಕ್ ವಲ್ಲಭ ಉಪಸ್ಥಿತರಿದ್ದರು.