Recent Posts

Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಚನ್ನರಾಯಪಟ್ಟಣದಲ್ಲಿ ನಡೆಯುವ ಕಬಡ್ಡಿ ಪಂದ್ಯದ ವೀಕ್ಷಕ ವಿವರಣೆಗಾಗಿ ಪಾಲು ಪಡೆದ ಸುಳ್ಯದ ಯುವಕ ವಿಖ್ಯಾತ್ – ಕಹಳೆ ನ್ಯೂಸ್

ಜನವರಿ 3 ಹಾಗು 4 ರಂದು ಚನ್ನರಾಯಪಟ್ಟಣದಲ್ಲಿ ನಡೆಯುವ ಕಬಡ್ಡಿ ಪಂದ್ಯದ ವೀಕ್ಷಕ ವಿವರಣೆಗಾಗಿ ಸುಳ್ಯದ ಯುವಕ ವಿಖ್ಯಾತ್ ಪಾಲು ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಾರ್ಪಣೆಯ ಯುವಕ ವಿಖ್ಯಾತ್ ಕಳೆದ 10 ವರುಷಗಳಿಂದ ಸಭಾ ಕಾರ್ಯಕ್ರಮ ನಿರೂಪಣೆ, ಕ್ರೀಡಾಕೂಟದ ವೀಕ್ಷಕ ವಿವರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆ್ಯಂಕರಿಂಗ್, ಹಿನ್ನೆಲೆ ಧ್ವನಿ, ಹಾಗು ವಾಹಿನಿಗಳಲ್ಲಿ ಸಂದರ್ಶನಗಳ ಮೂಲಕ ವಿಖ್ಯಾತ್ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ.

ಜಾಹೀರಾತು


ವಿಖ್ಯಾತ್ ಅವರು ತಮ್ಮ ನಿರೂಪಣ ಕೌಶಲ್ಯದ ಮೂಲಕ, ಲಾಕ್‍ಡೌನ್ ಸಂದರ್ಭದಲ್ಲಿ ಇನ್ಟಗ್ರಾಮ್ ನೇರಪ್ರಸಾರದ ಕಾರ್ಯಕ್ರಮದೊಂದಿಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸಾಧಕರನ್ನು ಸಂದರ್ಶನದಲ್ಲಿ ಪರಿಚಯಿಸಿದ್ದಾರೆ.


ಪ್ರತಿಯೊಂದು ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಜೊತೆಗೆ ಸಾಂಕ್ಕøತಿಕ ಕಾರ್ಯಕ್ರಮಗಳಲ್ಲಿ ವಿ ಜೆ ವಿಖ್ಯಾತ್ ಧ್ವನಿಯಾಗಿದ್ದಾರೆ. ಇವರ ಪಯಣ ಕೇವಲ ಕರಾವಳಿಗೆ ಸೀಮಿತವಾಗಿರದೆ, ಜನವರಿ 3 ಹಾಗು 4 ರಂದ್ದು ಚನ್ನರಾಯಪಟ್ಟಣದಲ್ಲಿ ನಡೆಯುವ ಕಬಡ್ಡಿ ಪಂದ್ಯದ ವೀಕ್ಷಕ ವಿವರಣೆಗಾಗಿ ವಿಖ್ಯಾತ್ ಪಾಲು ಪಡೆದಿದ್ದಾರೆ.