Recent Posts

Saturday, September 21, 2024
ದಕ್ಷಿಣ ಕನ್ನಡಸುದ್ದಿ

ಕುಲಶೇಖರ ಕುಚ್ಚಿಕ್ಕಾಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಪದವು ಸೆಂಟ್ರಲ್ ವಾರ್ಡಿನ ಕುಲಶೇಖರ ಕುಚ್ಚಿಕ್ಕಾಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಪದವು ಸೆಂಟ್ರಲ್ ವಾರ್ಡಿನ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ ಅನುದಾನಗಳನ್ನು ಜೋಡಿಸಲಾಗಿದ್ದು, ಕುಲಶೇಖರ ಕುಚ್ಚಿಕ್ಕಾಡು ರಸ್ತೆಗೆ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯಿಂದ 20 ಲಕ್ಷ ಅನುದಾನ ಒದಗಿಸಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಸ್ಥಳೀಯ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಮುಖಂಡರಾದ ರಾಮಚಂದ್ರ ಚೌಟ, ಅಶ್ವಿತ್ ಕೊಟ್ಟಾರಿ, ರವೀಂದ್ರ ಕುಚ್ಚಿಕ್ಕಾಡು, ಮಾಧವ ಭಟ್, ಸದಾಶಿವ ಕಕ್ಕೆಬೆಟ್ಟು, ವಸಂತ್ ಜೆ ಪೂಜಾರಿ, ಸುನಿಲ್ ಕುಂದರ್, ಚೇತನ್, ಲಿಖಿತ್, ದೇವಿ ಪ್ರಸಾದ್, ಲಿಯೋ ಸರಕೋಡಿ, ಸವಿತಾ ರೈ, ದಿನೇಶ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು