Saturday, September 21, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಎಕ್ಸಿಲ್ ತುಂಡಾಗಿ ರಸ್ತೆ ಬದಿಗೆ ಸರಿದ ಕೆಎಸ್ಆರ್ ಟಿಸಿ ಬಸ್ : ಚಾಲಕನ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾದ ಪ್ರಯಾಣಿಕರು- ಕಹಳೆ ನ್ಯೂಸ್

ಬಂಟ್ವಾಳ: ಚಲಿಸುತ್ತಿದ್ದ ವೇಳೆಯೇ ಸರ್ಕಾರಿ ಬಸ್ ನ ಎಕ್ಸಿಲ್ ತುಂಡರಿಸಿದ್ದು, ಚಾಲಕನ ಜಾಣ್ಮೆಯಿಂದಾಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಕಲ್ಲಡ್ಕ ಸಮೀಪದ ಬೋಳಂಗಡಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಿಂದ ಮಂಗಳೂರಿಗೆ ಹೊರಟಿದ್ದ ಸರ್ಕಾರಿ ಬಸ್ಸು ಕಲ್ಲಡ್ಕದಿಂದ ಮುಂದೆ ಬೋಳಂಗಡಿ ತಲುಪುತ್ತಿದ್ದಂತೆಯೇ ಈ ಅವಘಡ ನಡೆದಿದ್ದು, ಬಸ್ಸು ರಸ್ತೆಯ ತೀರಾ ಬಲಭಾಗಕ್ಕೆ ಚಲಿಸಿದೆ. ಚಾಲಕ ಜಾಣ್ಮೆಯಿಂದ ಬಸ್ಸನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲು ಪ್ರಯತ್ನಸಿದ್ದು, ಸುಮಾರು 200. ಮೀಟರ್ ದೂರ ಹೆದ್ದಾರಿ ಎಡಭಾಗದಲ್ಲಿ ಚಲಿಸಿ ಬೋಳಂಗಡಿ ಮಸೀದಿ ಸಮೀಪ ಬಸ್ಸನ್ನು ನಿಲ್ಲಿಸಿದ್ದಾನೆ. ಬಳಿಕ ಬಸ್ ನ ಪ್ರಯಾಣಿಕರನ್ನು ಬೇರೆ ಬಸ್ ನಲ್ಲಿ ಕಳುಹಿಸಿಕೊಡಲಾಗಿದೆ. ಚಾಲಕನ ಸಮಯಪ್ರಜ್ಞೆಯ ಚಾಲನೆಯನ್ನು ಪ್ರಯಾಣಿಕರು ಶ್ಲಾಘಿಸಿದ್ದಾರೆ.

ಜಾಹೀರಾತು