Friday, September 20, 2024
ರಾಜಕೀಯ

Breaking News : ಸ್ಪೀಕರ್ ರಮೇಶ್‌ ಕುಮಾರ್‌ಗೆ ರಾಜಭವನ ಪ್ರವೇಶ ನೀಡದೆ ಅವಮಾನ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಬಂದಿದ್ದ ಸ್ಪೀಕರ್ ನ್ನು ಪೊಲೀಸರು ರಾಜ್ಯಭವನ ಪ್ರವೇಶಕ್ಕೆ ಅವಕಾಶ ನೀಡದೆ ತೀವ್ರ ಅವಮಾನ ಎಸಗಿದ್ದಾರೆ.

ಈ ಕುರಿತು ಸ್ವತಃ ಸ್ಪೀಕರ್ ರಮೇಶ್‌ ಕುಮಾರ್ ಎಚ್‌ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ನಾನು ರಾಜ ಭವನಕ್ಕೆ ಆಹ್ವಾನ ನೀಡಿದ ನಿಮಿತ್ತ ಬಂದಿದ್ದೆ ಆದರೆ ರಾಜಭವನದ ಒಳಗೆ ಅವಕಾಶ ನೀಡದೆ ಪೊಲೀಸರು ಮತ್ತು ಅಲ್ಲಿನ ಅಧಿಕಾರಿಗಳು ದುರಹಂಕಾರವನ್ನು ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇಂತಹ ದುರಹಂಕಾರ ವ್ಯವಸ್ಥೆಗೆ ಸರ್ಕಾರ ಕಡಿವಾಣ ಹಾಕದೆ ಹೋದರೆ ಸಾಂವಿಧಾನಿಕ ಹುದ್ದೆಯಲ್ಲಿರುವ ತಮಗೆ ಹಾಗೂ ಸರ್ಕಾರಕ್ಕೆ ಅವಮಾನವಾದಂತೆ ಎಂದು ಬರೆದಿದ್ದಾರೆ.

ರಾಜಭವನದ ಒಳಗೂ ಹೊರಗೂ ತುಂಬಿದ್ದಂತಹ ವಾಹನಗಳು ಯಾವುದು, ಯಾರು ಇಬರಿಗೆ ಅನುಮತಿ ನೀಡಿದ್ದಾರೆ ಹಾಗೂ ಸಾರ್ವಜನಿಕ ಜೀವನದಲ್ಲಿ ಇದವರ ಸ್ಥಾನಮಾನ ಏನು ಎಂದು ನಾನು ತಿಳಿದುಕೊಳ್ಳಬೇಕು ಎಂದು ಪತ್ರದಲ್ಲಿ ಪ್ರಶಸ್ನಿಸಿದ್ದಾರೆ