Friday, September 20, 2024
ಸುದ್ದಿ

ರಾಜಗೋಪಾಲ್ ಭಟ್ ಕೈಲಾರ್ ಈಗ ಡಾ‌. ರಾಜಗೋಪಾಲ್ ಭಟ್ ಕೈಲಾರ್ ; ಪ್ರತಿಷ್ಠಿತ ಗೌರವ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆಯ ಅಧ್ಯಾತ್ಮಿಕ ಜೀವಿಗೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಇಂಡಿಯನ್ ವರ್ಚುಮ್ ಮೋಡ್ ಯೂನಿವರ್ಸಿಟಿ ಫಾರ್ ಪೀಸ್ ಎಂಡ್ ಎಜುಕೇಶನ್ ಕೊಡಮಾಡುವ ಗೌರವ ಡಾಕ್ಟರೇಟ್ ಗೆ ಉಪ್ಪಿನಂಗಡಿ ವಾಸ್ತುಗಿಡ ತಜ್ಞ, 26 ಸಾವಿರಕ್ಕೂ ಹೆಚ್ಚು ಮಂದಿಗೆ ಧನಾತ್ಮಕ ಬದುಕಿನ ಪ್ರೇರಣೆ ನೀಡಿದ ಕೈಲಾರ್ ರಾಜಗೋಪಾಲ್ ಪಾತ್ರರಾಗಿದ್ದಾರೆ.


ಧಾರವಾಡದ ಕರ್ನಾಟಕ ಕಾಲೇಜು ಕ್ಯಾಂಪಸಿನ ಸೃಜನ್ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಸಂಹಾಸನದ ಪರಮ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಗೌರವ ಡಾಕ್ಟರೇಟ್ ಪ್ರಧಾನಿಸಿ ಮಾತನಾಡುತ್ತಾ ಸಮಾಜ ಸೇವಯನ್ನೇ ಉಸಿರಾಗಿಸಇರುವ ಹಲವಾರು ಸಮಾಜ ಸೇವಕರ ಸಹಿತ ವಿವಿಧ ಕ್ಷೇತ್ರದ ಗಣ್ಯರಿಗೆ ಡಾಕ್ಟರೇಟ್ ಪ್ರಧಾನಿಸಲು ಸಂತೋಷ ಪಡುತ್ತಿದ್ದೇನೆ ಎಂದರು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಕೈಲಾರ್ ರಾಜ ಗೋಪಾಲ ಭಟ್ ಮಾತನಾಡಿ ಇದು ನನ್ನ ಬದುಕಿನ ಅತ್ಯಂತ ಸಂತೋಷದ ಘಳಿಗೆಯಾಗಿದ್ದು.12 ವರ್ಷದ ಕೌನ್ಸಿಲಿಂಗ್ ಸೇವೆಗೆ ದೊರೆ ಪ್ರತಿಫಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಚೇರ್ ಮ್ಯಾನ್ ರೆ ಡಾ| ಡೇನಿಯಲ್ ಎಡ್ವಿನ್ ರಾಯಚೂರು ವಿವಿ ಯ ಕುಲಪತಿ ಡಾ| ಪ ಎಂ ಸಾಲಿಮಠ್ , ವಿಷ್ಣು ಸಹಸ್ರನಾಮ ಫೆಡರೇಶನ್ ಸ್ಥಾಪಕ ಅಧ್ಯಕ್ಷರಾದ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ, ಧಾರವಾಡ ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ| ರಾಜೇಶ್ವರಿ ಮಹೇಶ್ವರಯ್ಯ, ಶಿವಯೋಗಿ ಮಹಾಸ್ವಾಮಿ ಶ್ರೀ ಶ್ರೀ ತ್ರಿನೇತ್ರ ಮಹಾಂತ, ಸೀನಿಯರ್ ಅಡ್ವಕೇಟ್ ಪ್ರೋ ಜೆ ಎಸ್ ಕುಲಕರ್ಣಿ, ಡಾ| ಎ. ಪುಷ್ಪ ಅಯ್ಯಂಗಾರ್ ಮುಂತಾದವರು ವೇದಿಕೆಯಲ್ಲಿದ್ದರು.
ಟೀನ್ ಡಾ| ಜಾನ್ ಲೆಸ್ಲಿಕುಮಾರ್ ಸ್ವಾಗತಿಸಿದರು ಕು ಅಂಜನಾ ಕಾರ್ಯಕ್ರಮ ನಿರೂಪಿಸಿದರು.