Friday, September 20, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ : ಭಾರೀ ಮಳೆಗೆ ರಸ್ತೆಗೆ ಉರುಳಿದ ಬೃಹದಾಕಾರದ ಬಂಡೆ – ಕಹಳೆ ನ್ಯೂಸ್

ಬಂಟ್ವಾಳ : ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೃಹತ್ ಗಾತ್ರದ ಬಂಡೆ ಕುಸಿದು ರಸ್ತೆಗೆ ಉರುಳಿದ ಘಟನೆ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರನ ಸನ್ನಿಧಿಯಲ್ಲಿ ನಡೆದಿದೆ.

ಬೃಹತ್ ಗಾತ್ರದ ಕಲ್ಲುಗಳ ಬುಡ ಸಂದಿಗಳು ಸಡಿಲಗೊಂಡಿದ್ದರಿAದ ಅನಾಹುತ ನಡೆದಿದ್ದು, ಇದೇ ರೀತಿ ದೇಗುಲಕ್ಕೆ ಆಧಾರಸ್ಥಂಭವಾಗಿ ನಿಂತಿರುವ ಬಂಡೆಗಳು ಕುಸಿದರೆ ಅನ್ನೋ ಆತಂಕ ಇದೀಗ ಭಕ್ತರನ್ನು ಕಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇನ್ನು ಕಾರಿಂಜೇಶ್ವರ ಕ್ಷೇತ್ರದ ಸುತ್ತಮುತ್ತ ಈ ಹಿಂದೆ ನಡೆಯುತ್ತಿದ್ದ ಗಣಿಕಾರಿಕೆಯ ಸ್ಫೋಟದ ಪರಿಣಾಮದಿಂದ ಈ ರೀತಿ ಬಂಡೆ ಕುಸಿದಿರಬಹುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.