Friday, September 20, 2024
ಸುದ್ದಿ

Big Breaking : ಕರಾವಳಿಗರೇ ಎಚ್ಚರಿಕೆ !! ಮಂಗಳೂರು ಕಡಲ ತೀರದಲ್ಲಿ ಭಾರೀ ಸುಂಟರಗಾಳಿ, ಜಿಲ್ಲೆಯಾದ್ಯಂತ ಕಟ್ಟೆಚ್ಚರ – ಕಹಳೆ ನ್ಯೂಸ್

ಮಂಗಳೂರು: ಎರಡು ದಿನಗಳಿಂದ ಬಿಡುವು ಪಡೆದಿದ್ದ ವರುಣ ಕರಾವಳಿ ಜನರಿಗೆ ಮತ್ತೆ ದರ್ಶನ ಭಾಗ್ಯ ಕೊಡಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿಯಲ್ಲಿ ಮುಂದಿನ ಎರಡು ದಿನ ಹೈ ಅಲರ್ಟ್ :

ಜಾಹೀರಾತು

ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮಳೆಗೆ ಬಿಡುವು ಸಿಕ್ಕಿತ್ತು. ಇದೀಗ ಮತ್ತೆ ಮುಂದಿನ ಎರಡು ದಿನ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೀಗಾಗಿ ಎಚ್ಚರಿಕೆ ವಹಿಸುವಂತೆ ಜನರಿಗೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಕಳೆದ ವಾರ ಸುರಿದ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರ ಬಂದ್ ಆಗಿತ್ತು. ಈ ಮಳೆಗೆ ಇನ್ನೇನು ಅವಾಂತರ ಕಾದಿದೆಯೋ ಎಂಬ ಆತಂಕದಲ್ಲಿ ಜನತೆ ಇದ್ದಾರೆ