Saturday, September 21, 2024
ಸುದ್ದಿ

ಕಡಿಯಾಳಿ ಮಹಿಷಮರ್ಧಿನಿ ಅಮ್ಮನವರ ಬ್ರಹ್ಮಕಲಶದ ಸುಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಡಿಯಾಳಿ ಸೇವಾಓಕುಳಿ ಸಂಪನ್ನ – ಕಹಳೆ ನ್ಯೂಸ್

ಉಡುಪಿ: ಕಡಿಯಾಳಿ ಮಹಿಷಮರ್ಧಿನಿ ಅಮ್ಮನವರ ಬ್ರಹ್ಮಕಲಶದ ಸುಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆ ಸಂಪನ್ನಗೊಂಡಿದ್ದು ಫಲಾನುಭವಿಗಳಿಗೆ ಕ್ಷೇತ್ರದಲ್ಲಿ ಸಂಗ್ರಹ ಮೊತ್ತವನ್ನು ಹಸ್ತಾಂತರಿಸಲಾಯಿತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

12 ಸಂಘಟನೆಗಳ ಸಹಯೋಗದೊಂದಿಗೆ ವಿಶೇಷ ವೇಷ ಧರಿಸಿ,ಚೆಂಡೆ ವಾದನ ಹಾಗೂ ನಾಸಿಕ್ ಬ್ಯಾಂಡ್ ಆಕರ್ಷಣೆಯ ಮೂಲಕ ನಿಧಿ ಸಂಗ್ರಹಿಸಲಾಗಿತ್ತು
ಮೂರು ಮಹಾಯೋಜನೆಗಳಡಿಯಲ್ಲಿ ತಲಾ 43,000 ಗಳಂತೆ 1,29,000 ನೀಡಲಾಯಿತು. ತುರ್ತುನಿಧಿ ಯೋಜನೆಯಡಿ ಎರಡು ಕುಟುಂಬಕ್ಕೆ ತಲಾ ಹತ್ತು ಸಾವಿರದಂತೆ 20,000 ಹಸ್ತಾಂತರಿಸಲಾಗಿದ್ದು, ಸೇವಾಪಥ ಕ್ಷೇಮನಿಧಿಗೆ 10,000 ಮೀಸಲಿಡಲಾಗಿದೆ.

ಒಟ್ಟು 1,59,000 ಸಮರ್ಪಣೆಯಾಗಿದ್ದು ಕ್ಷೇತ್ರದ ಪ್ರಮುಖರಾದ ಶ್ರೀ ರಾಘವೇಂದ್ರ ಕಿಣಿ ಹಾಗೂ ಸುನಿಲ್ ಕುಲಾಲ್ ಸೇವಾಪಥ ಕಾರ್ಯಕರ್ತರ ಒಡಗೂಡಿ ಚೆಕ್ ಹಸ್ತಾಂತರಿಸಿ ಶುಭಹಾರೈಸಿದರು.