Friday, September 20, 2024
ಸುದ್ದಿ

ರಾಘವೇಶ್ವರಭಾರತೀ ಶ್ರೀಗಳನ್ನು ಭೇಟಿ ಮಾಡಿ ಗೋ ಸಂರಕ್ಷಣೆಯ ಕುರಿತು ಮಹತ್ವದ ಚರ್ಚೆ ನಡೆಸಿದ ಹಿಂದೂ ಫಯರ್ ಬ್ರಾಂಡ್ ಅನಂತ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಬಾನ್ಕುಳಿ : ರಾಮದೇವ ಬಾನ್ಕುಳಿ ಮಠಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಭೇಟಿ ನೀಡಿ ತಮ್ಮ ಕುಲಗುರುಗಳಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳ ಭೇಟಿ ಮಾಡಿ ಮಾತುಕತೆ ನಡೆಸಿದರು.

ಗೋ ಹತ್ಯೆ ನಿಷೇಧ ವಿಚಾರದಲ್ಲಿ ಮಹತ್ವದ ಮಾತುಕತೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ರಾಘವೇಶ್ವರ ಭಾರತೀ ಶ್ರೀಗಳು ಮೊದಲಿನಿಂದಲೂ ಗೋ ಸಂರಕ್ಷಣೆಗಾಗಿಯೇ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟವರು ಇನ್ನು ಅವರ ಶಿಷ್ಯ ಅನಂತ ಕುಮಾರ ಹೆಗಡೆ ಹಿಂದುತ್ವದ ಫಯರ್ ಬ್ರಾಂಡ್ ರಾಜಕಾರಣಿ ಗೋವಿನ ವಿಚಾರ ಬಂದಾಗ ಗೋಹಂತಕರ ಕೈ ಕಡಿರಿ ಎಂದ ಖ್ಯಾತಿ ಅವರಿಗೇ ಸಲ್ಲುತ್ತದೆ. ಹೀಗೆ ಅವರಿಬ್ಬರ ಭೇಟಿ ಮತ್ತು ಗೋ ಸಂರಕ್ಷಣೆ ಮತ್ತು ಗೋ ಹತ್ಯೆ ನಿಷೇಧ ವಿಚಾರವಾಗಿ ನಡೆಸಿದ ಮಾತುಕತೆ ಈ ಕಾರಣಕ್ಕಾಗಿಯೇ ಮಹತ್ವ ಪಡೆದುಕೊಂಡಿದೆ.

ಗೋ ಸ್ವರ್ಗ ಸಂದರ್ಶಿಸಿ ಹೆಗಡೆ ಫುಲ್ ಖುಷ್ :

ಸ್ವಾಮೀಜಿಯವರ ಕಲ್ಪನೆಯ ಗೋ ಸ್ವರ್ಗವನ್ನು ಕಂಡು ಹೆಗಡೆ ಅತೀವ ಹರ್ಷ ವ್ಯಕ್ತಪಡಿಸಿದಲ್ಲದೆ, ಸರಕಾರವೇ ಮುಂದೆ ನಿಂತು ಮಾಡಬೇಕಾದ ಕೆಲಸವನ್ನು ಇಂದು ಗುರುಗಳು ಮಾಡುತ್ತಿದ್ದಾರೆ ಎಂದು ಹೇಳಿದರು.