Friday, September 20, 2024
ಸುದ್ದಿ

Breaking News : ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಕ್ ನೀಡಿದ ಪತಿ – ಕಹಳೆ ನ್ಯೂಸ್

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪಹರೇತ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ರೊಟ್ಟಿ ಸುಟ್ಟು ಹೋಗಿದೆ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬ ಪತ್ನಿಗೆ ಮೂರು ಬಾರಿ ತಲಾಕ್ ಹೇಳಿದ್ದಾನೆ.

ನಿಹಾಲ್ ಖಾನ್ ಜೊತೆ ರಜಿಯಾ ಮದುವೆ ಜುಲೈ 4, 2017 ರಲ್ಲಿ ನಡೆದಿತ್ತು. ರೊಟ್ಟಿ ಸುಟ್ಟು ಹೋಗಿದೆ ಎನ್ನುವ ಕಾರಣ ಹೇಳಿ ನಿಹಾಲ್, ರಜಿಯಾಗೆ ತಲಾಕ್ ನೀಡಿದ್ದಾನೆ. ನಂತ್ರ ರಜಿಯಾಳನ್ನು ಮನೆಯಿಂದ ಹೊರ ಹಾಕಿದ್ದಾನೆ. ರಜಿಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಳಂತೆ. ಆದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳದ ಕಾರಣ ಪೊಲೀಸ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ರಜಿಯಾಗೆ ತಲಾಕ್ ನೀಡುವ ಮೂರು ದಿನ ಮೊದಲು ನಿಹಾಲ್ ಹಿಂಸೆ ನೀಡಿದ್ದನಂತೆ. ಸಿಗರೇಟಿನಿಂದ ರಜಿಯಾ ದೇಹದ ಕೆಲ ಭಾಗವನ್ನು ಸುಟ್ಟಿದ್ದನಂತೆ.