Friday, September 20, 2024
ರಾಜಕೀಯ

ಇಂದು ಬಿಎಸ್‍ವೈಗಾಗಿ ಊಟಕ್ಕೆ ಕುಳಿತಿದ್ದ ಕುರ್ಚಿ ಬಿಟ್ಟು ಕೊಟ್ರು ಎಚ್‍ಡಿಕೆ ಇನ್ನು ನಾಳೆ ಸಿಎಂ ಕುರ್ಚಿನೂ..? – ಕಹಳೆ ನ್ಯೂಸ್

ಬೆಂಗಳೂರು: ಸದನದಲ್ಲಿ ಭಾರೀ ಚಕಮುಕಿ ನಡೆಸುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮುಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಮರೆತು ಔತಣಕೂಟದಲ್ಲಿ ಭಾಗವಹಸಿ, ಸಹಕಾರದಿಂದ ನಡೆದುಕೊಂಡಿದ್ದಾರೆ.

ಇಂದು ಮಧ್ಯಾಹ್ನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ಸಿಎಂ ಕುಮಾರಸ್ವಾಮಿ ಅವರು ಭೋಜನ ಕೂಟ ಆಯೋಜಿಸಿದ್ದರು. ಔತಣಕೂಟಕ್ಕೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಆಗಮಿಸುತ್ತಿದಂತೆ ಅವರನ್ನು ಕುಮಾರಸ್ವಾಮಿ ಕೈ ಕುಲುಕಿ ಆಹ್ವಾನಿಸಿ, ತಾವು ಕುಳಿತಿದ್ದ ಕುರ್ಚಿಯನ್ನು ಬಿಟ್ಟುಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕುಮಾರಸ್ವಾಮಿ ಅವರ ಸ್ಥಾನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಭೋಜನ ಸವಿದರು. ಕಲಾಪದ ಚರ್ಚೆಗಳನ್ನು, ರಾಜಕೀಯ ಅಸಮಾಧಾನವನ್ನು ಬದಿಗಿಟ್ಟು ಔತಣಕೂಟದಲ್ಲಿ ಭಾಗಿಯಾಗಿದರು. ಯಡಿಯೂರಪ್ಪ, ಸಿದ್ದರಾಮಯ್ಯ ಜೊತೆಯಲ್ಲೇ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ ಹೊರಟ್ಟಿ ಸಹ ಭೋಜನ ಸವಿದರು.

ಆದರೆ ನಾಳೆ ಸಿ.ಎಂ. ಕುರ್ಚಿಯನ್ನು ಬಿಟ್ಟುಕೊಡುತ್ತಾರಾ ಎಂದು ಸಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹರಿದಾಡುತ್ತಿವೆ.