Thursday, September 19, 2024
ಸುದ್ದಿ

50 ಲಕ್ಷ ರೂ ವೆಚ್ಚದಲ್ಲಿ ಯೆಯ್ಯಾಡಿಯ ಐಟಿಐ ಬಳಿಯ ಶ್ರೀ ರಾಮ ದೇವಸ್ಥಾನದ ನೂತನ ಕೆರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರಾದ ಡಾ.ವೈ.ಭರತ್ ಶೆಟ್ಟಿ –ಕಹಳೆ ನ್ಯೂಸ್

50 ಲಕ್ಷ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಯೆಯ್ಯಾಡಿಯ ಐಟಿಐ ಬಳಿಯ ಶ್ರೀ ರಾಮ ದೇವಸ್ಥಾನದ ನೂತನ ಕೆರೆ ನಿರ್ಮಾಣಕ್ಕೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ದೇವಸ್ಥಾನದ ಗೌರವಾಧ್ಯಕ್ಷರಾದ ಪದ್ಮನಾಭ ಕೋಡಿಯಾಲಬೈಲ್ , ಅಧ್ಯಕ್ಷರಾದ ಕಮಲಾಕ್ಷ ಬಂಗೇರ, ಉಪಾಧ್ಯಕ್ಷರಾದ ಪುರಂದರ ಬಂಗೇರ, ಜಿತೇಂದ್ರ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಉರ್ವ, ಕೋಶಾಧಿಕಾರಿ ಎ.ಕೆ.ಜಯರಾಮ್ ಯೆಯ್ಯಾಡಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ದಂಡಕೇರಿ, ಉಪಾಧ್ಯಕ್ಷರಾದ ವಸಂತ್ ಬೋಂದೆಲ್, ಮೋಹನ್ ಯೆಯ್ಯಾಡಿ, ಪ್ರಕಾಶ್ ಗುಜ್ಜೊಟ್ಟೊ, ಪ್ರದೀಪ್ ಗುಜ್ಜೊಟ್ಟೊ, ಹಿರಿಯ ಸಲಹೆಗಾರರಾದ ರಾಮಚಂದ್ರ ತೋಟ, ಜಲೀಂದ್ರ ಯೆಯ್ಯಾಡಿ, ಕಾರ್ಯದರ್ಶಿ ದಯಾನಂದ ಸುವರ್ಣ, ಭಜನಾ ಸಂಘಟಕರಾದ ರಘುರಾಮ್, ಮಾತೃ ಸಂಘದ ಗೌರವಾಧ್ಯಕ್ಷರಾದ ಸುನಂದ ಗುಜ್ಜೊಟ್ಟೊ, ಅಧ್ಯಕ್ಷೆ ಸುಚಿತ್ರಾ ಶಿವಾನಂದ, ಕಾರ್ಯದರ್ಶಿ ಮೋಹಿನಿ ಲೋಕನಾಥ್, ಹಾಗೂ ಬೂತಿನ ಅಧ್ಯಕ್ಷರುಗಳಾದ ಉಮೇಶ್ ಶೆಟ್ಟಿ, ಹರಿಪ್ರಸಾದ್, ಆಡಳಿತ ಸಮಿತಿ ,ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು