Thursday, September 19, 2024
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಅಮ್ಮೆ ಅವುಲುಲ ಇಜ್ಜೆ ಮೂಲುಲ ಇಜ್ಜೆ, ಕೋರಿದ ಗೂಡುಡುಲ ಇಜ್ಜೆ – ಹೊರಬಿತ್ತು ಬೆಳ್ತಂಗಡಿ ಕಾಂಗ್ರೆಸ್ ನ ಬಣ ರಾಜಕೀಯ ; ವಸಂತ ಬಂಗೇರರಿಗೆ ಟಿಕೇಟ್ ಕೊಡಿ ಇಲ್ಲದಿದ್ರೆ ನನಗೆ ಟಿಕೇಟ್ ಕೊಡಿ, ರಕ್ಷಿತ್ ಶಿವರಾಮ್ ಗೆ ಬೇಡ ಎಂದ ಗಂಗಾಧರ ಗೌಡ – ಕಹಳೆ ನ್ಯೂಸ್

ಬೆಳ್ತಂಗಡಿ : ‘ ಅಮ್ಮೆ ಅವುಲುಲ ಇಜ್ಜೆ ಮೂಲುಲ ಇಜ್ಜೆ, ಕೋರಿದ ಗೂಡುಡುಲ ಇಜ್ಜೆ ‘ ಈ ಜಾನಪದ ಗಾದೆ ಮಾತಿನಂತೆ ಒಂದು ಘಟನೆ ಬೆಳ್ತಂಗಡಿ ಕಾಂಗ್ರೆಸ್ ನ ಒಳಗೆ ಘಟಿಸಿದೆ. ಬೆಳ್ತಂಗಡಿ ಕಾಂಗ್ರೆಸ್ ನ ಬಣ ರಾಜಕೀಯ ಬಹಿರಂಗಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಹೌದು, ಬೆಂಗಳೂರಿನಲ್ಲಿ ಕಾಂಗ್ರೆಸ್ ನ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದು, ಈಗಾಗಲೇ ಬೆಳ್ತಂಗಡಿಯಿಂದಲೂ ವಸಂತ ಬಂಗೇರ, ಗಂಗಾಧರ ಗೌಡ, ರಕ್ಷಿತ್ ಶಿವರಾಮ್ ಸೇರಿದಂತೆ ಇನ್ನೂ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದ್ದು, ಇದರಿಂದ ಹತಾಶರಾದ ಕೆಲ ವಲಸಿಗರು, ಜೊತೆಗೆ ‘ ವಸಂತ ಬಂಗೇರರಿಗೆ ಟಿಕೇಟ್ ಕೊಡಿ ಇಲ್ಲದಿದ್ರೆ ನನಗೆ ಟಿಕೇಟ್ ಕೊಡಿ, ರಕ್ಷಿತ್ ಶಿವರಾಮ್ ಗೆ ಬೇಡ ಎಂದ ಗಂಗಾಧರ ಗೌಡ ಈ ಸಂದರ್ಭದಲ್ಲಿ ಬಹಿರಂಗವಾಗಿ ಹೇಳಿಕೆ ನೀಡುವುದರ ಮೂಲಕ ಬಣ ರಾಜಕೀಯ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.