Friday, September 20, 2024
ಸುದ್ದಿ

Breaking News : ರಾಘವೇಶ್ವರ ಭಾರತೀ ಶ್ರೀಗಳ ಆರೋಗ್ಯದಲ್ಲಿ ವೈಪರೀತ್ಯ ; ” ಗೋಸ್ವರ್ಗ ” ಚಾತುರ್ಮಾಸ್ಯ ಬೆಂಗಳೂರಿಗೆ ಶಿಫ್ಟ್ – ಕಹಳೆ ನ್ಯೂಸ್

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳ ಬೇಕೆಂದು, ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಯೋಚಿಸಿದ್ದರು.

ಆದರೆ, ಶ್ರೀಗಳು ಕಿಡ್ನಿ ಸ್ಟೋನ್ ನಿಂದ ಬಳಲುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಚಿಕಿತ್ಸೆಯ ಅವಶ್ಯಕತೆ ಇರುವದರಿಂದಲೂ, ವಿಶ್ರಾಂತಿಯ ಅಗತ್ಯ ಇರುವದರಿಂದಲೂ ಚಾತುರ್ಮಾಸ್ಯವನ್ನು ಬೆಂಗಳೂರಿನಲ್ಲಿಯೇ ಕೈಗೊಂಡು, ವಿಶ್ರಾಂತಿಯನ್ನೂ ಪಡೆಯು ಉದ್ದೇಶದಿಂದ ನಿರ್ಧರಿಸಲಾಗಿದೆ ಎಂದು ಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಆದ್ದರಿಂದ ಗೋ ಸ್ವರ್ಗ ಚಾತುರ್ಮಾಸ್ಯವು ಇದೇ ಬರುವ ಆಷಾಢ ಕೃಷ್ಣ ಚತುರ್ಥಿಯಿಂದ (01-08-2018) ಬೆಂಗಳೂರಿನ ಗಿರಿನಗರ ಮಠದಲ್ಲಿ ಆರಂಭಗೊಳ್ಳಲಿದೆ.