Friday, September 20, 2024
ಉಡುಪಿಸುದ್ದಿ

ಹಂದಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಕೋಟದ ಹಂದಟ್ಟು ಮಹಿಳಾ ಬಳಗದಿಂದ ಗೋವಿಗಾಗಿ ಮೇವು ಕಾರ್ಯಕ್ರಮ-ಕಹಳೆ ನ್ಯೂಸ್

ಕೋಟದ ಹಂದಟ್ಟು ಮಹಿಳಾ ಬಳಗದಿಂದ ಗೋವಿಗಾಗಿ ಮೇವು ಕಾರ್ಯಕ್ರಮ ಹಂದಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಕಿ ಹಂದೆ ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕೋಟದ ಹಂದಟ್ಟು ಮಹಿಳಾ ಬಳಗದಿಂದ ಗೋವಿಗಾಗಿ ಮೇವು ಕಾರ್ಯಕ್ರಮ ಹಂದಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಕಿ ಹಂದೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ, ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಕರಾವಳಿ ಭಾಗದಲ್ಲಿ ಪ್ರತೀ ಮನೆಯ ಮಹಿಳೆಯರು ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ತೊಡಗುತ್ತಿರುವುದು ಕಾರ್ಯಕ್ರಮದ ಯಶಸ್ಸಿನ ಒಂದು ಭಾಗವಾಗಿದೆ ಎಂದರು. ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಕೋಟ ವಲಯ ಅದ್ಯಕ್ಷ ಕ್ರಷ್ಣಮೂರ್ತಿ ಮರಕಾಲ, ಮಹಿಳಾ ಬಳಗದ ಅಧ್ಯಕ್ಷೆ ಪುಷ್ಪಾ ಹಂದಟ್ಟು ,ಮಹಿಳಾ ಬಳಗದ ಕಾರ್ಯದರ್ಶಿ ಗೀತಾ ಹಂದಟ್ಟು, ಗೋವಿಗಾಗಿ ಮೇವು ಕೋಟ ವಲಯದ ಗೌರವ ಅಧ್ಯಕ್ಷೆ ಸುಜಾತಾ ಬಾಯಿರಿ ,ಗೌರವ ಅದ್ಯಕ್ಷರಾದ ಉಮೇಶ್ ಪೂಜಾರಿ ಮಹಿಳಾ ಬಳಗದ ಪಧಾದಿಕಾರಿಗಳು,ಪಾಂಚಜನ್ಯ ಸಂಘದ ಪದಾದಿಕಾರಿಗಳು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು,ಕಾರ್ಯದರ್ಶಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.