Thursday, September 19, 2024
ಸುದ್ದಿ

ರೂಪೇಶ್ ಶೆಟ್ಟಿ ಜೊತೆ ಕೊರಗಜ್ಜನ ಸನ್ನಿಧಿಗೆ ಬರುತ್ತೇನೆ : ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಬಿಗ್ ಬಾಸ್ ನ ಸ್ಪರ್ಧಿಗಳಲ್ಲಿ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಒಂದೊಂದು ವಾರನೂ ಒಬ್ಬೊಬ್ಬರು ಮನೆಯಿಂದ ಹೋಗ್ತಾ ಇದ್ದಾರೆ.

ಅದರಲ್ಲಿಯೂ ಊಹಿಸಲಾಗದೇ ಇರುವ ಸ್ಪರ್ಧಿಯೇ ಮನೆಯಿಂದ ಹೊರಗೆ ಹೋಗ್ತಾ ಇದ್ದಾರೆ. ಹೌದು ಬಿಗ್ ಬಾಸ್ ಓಟಿಟಿಯಲ್ಲಿ ಸದ್ದು ಮಾಡಿ ಬಿಗ್ ಬಾಸ್ ಟಿವಿ ಶೋಗೆ ಎಂಟ್ರಿಕೊಟ್ಟಿದ್ದ ಸಾನ್ಯ ಅಯ್ಯರ್ ಆರನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡು ನಂತರ ಟಿವಿ ಸೀಸನ್​ಗೂ ಬಂದಿದ್ದು ಇವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಬೆಳೆದಿತ್ತು. ಆದರೆ, ಸಾನ್ಯಾ ಐಯ್ಯರ್ ಆರನೇ ವಾರ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಹೋಗಿದ್ದಾರೆ.

ಮನೆಯಿಂದ ಹೊರಬಂದ ಮೇಲೆ ಸಾನ್ಯಾ ಮೊದಲ ಭಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಲೈವ್ ಬಂದಿದ್ದಾರೆ. ಈ ವೇಳೆ ಸಾನ್ಯರನ್ನ ಫ್ಯಾನ್ಸ್ ಯಾವಾಗ ಮಂಗಳೂರಿಗೆ ಬರುತ್ತೀರಾ ಎಂದು ಕೇಳಿದ್ದು, ಇದಕ್ಕೆ ಪ್ರತಿಕ್ರಿಸಿದ ಸಾನ್ಯಾ ಅಯ್ಯರ್ “ರೂಪೇಶ್ ಶೆಟ್ಟಿ ಜೊತೆ ಕೊರಗಜ್ಜನ ಸನ್ನಿಧಿಗೆ ಬರುತ್ತೇನೆ” ಎಂದು ಹೇಳಿದ್ದಾರೆ.