Friday, September 20, 2024
ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಯುವ ನಾಯಕ ದಿಲ್ ರಾಜ್ ಆಳ್ವ ಆಯ್ಕೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಿಕರ ಸಂಘದ ಅಧ್ಯಕ್ಷರಾಗಿ ಯುವನಾಯಕ ದಿಲ್ ರಾಜ್ ಆಳ್ವ ಆಯ್ಕೆಯಾಗಿದ್ದಾರೆ.

ರಾಮಕೃಷ್ಣ ಮಠದ ಸ್ವಚ್ಛ ಭಾರತ್ ಅಭಿಯಾನ ಸೇರಿದಂತೆ ಹತ್ತಾರು ಸಮಾಜಿಕ ಚಳವಳಿಯಲ್ಲಿ ಮುಚ್ಚೂಣಿನಾಯಕತ್ವವನ್ನು ವಹಿಸಿ ಕೆಲಸ ಮಾಡಿ ಮಾದರಿ ಎನಿಸಿಕೊಂಡ ಯುವಕರ ನಾಯಕ ದಿಲ್ರಾಜ್ ಆಳ್ವ ಈಗ ದಕ್ಷಿಣ ಕನ್ನಡ ಜಿಲ್ಲಾ ಬಸ್ಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕಹಳೆ ನ್ಯೂಸ್ ಜೊತೆ ಮಾತನಾಡಿದ ನೂತನ ಅಧ್ಯಕ್ಷ ದಿಲ್ ರಾಜ್ , ಬಸ್ಸ್ ಕೆವಲ ಒಂದು ವಾಹನ ವ್ಯವಸ್ಥೆಯಲ್ಲ ಸಮಾಜದ ಒಂದು ಅವಿಭಾಜ್ಯ ಅಂಗ . ಜನರಿಂದ ಜನರಿಗಾಗಿ ಸೇವೆ ಮಾಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.

ಉಳಿದಂತೆ ಉಪಾಧ್ಯಕ್ಷರಾಗಿ ಶ್ರೀಧರ್ಜ್ ಶೆಟ್ಟಿ, ಕಾರ್ಯದರ್ಶಿ ಯಾಗಿ ಪ್ರಕಾಶ್ ಶೇಖ, ಜೊತೆಕಾರ್ಯದರ್ಶಿಯಾಗಿ ಚಂದ್ರ ಮತ್ತು ಖಜಾಂಚಿ ಯಾಗಿ ಸುಹಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.