Friday, September 20, 2024
ಸುದ್ದಿ

ಕೊಡಗಿನ ಸಂತ್ರಸ್ತ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಕ್ಕಂದೂರು ಪ್ರಕಾಶ್ ಗೆ ಸಹಾಯ ಹಸ್ತ ಚಾಚಿದ ಡಾ. ಉದಯ ಕುಮಾರ್ ಮತ್ತು ಸೇವಾ ಭಾರತಿ ; ಇದು ಕಹಳೆ ನ್ಯೂಸ್ ಇಂಪ್ಯಾಟ್ ! – ಕಹಳೆ ನ್ಯೂಸ್

ಕೊಡಗು : ಮಳೆಯ ಅವಾಂತರದಿಂದ ತತ್ತರಿಸಿದ ಕೊಡಗಿನ ಒಬ್ಬೊಬ್ಬರ ಪರಿಸ್ಥಿತಿಯೂ ಶೋಕಸಾಗರದಲ್ಲಿ ಮುಳುಗಿದೆ‌. ಉಳಿಯಲು ಸೂರಿಲ್ಲ, ಒಪ್ಪತ್ತಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ಮಧ್ಯೆ ಮಕ್ಕಂದೂರು ನಿವಾಸಿ ಪ್ರಕಾಶ್ ಎಂಬುವವರಿಗೆ ಮೊದಲೇ ಕಡು ಬಡತನ, ಜೊತೆಗೆ ತಮ್ಮ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದರು ಜೊತೆಗೆ ಕೊಡಗಿನ ಪ್ರವಾಹಕ್ಕೆ ಸಿಲುಕಿ ಈತ ನನ್ನದಾಗಿ ಇದ್ದ ಏಕೈಕ ಮನೆಯನ್ನೂ ಕಳೆದುಕೊಂಡು, ಅನಾಥನಾಗಿದ್ದ. ಈ ಬಡಪಾಯಿ ಪ್ರಕಾಶನಿಗೀಗ ಒಪತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ನತದೃಷ್ಟನಿಗೀಗ ಸಹಾಯದ ಹಸ್ತ ಬೇಕಾಗಿದೆ. ನೀವೂ ಅಹಾಯ ಮಾಡಬಹುದು ಈತ ಖಾತೆಗೆ ನಿಮ್ಮ ಸಹಾಯ ಜಮೆ ಮಾಡಿ, ಈತನ ಕುಟುಂಬದ ಉಳಿವಿಗ ನೀವೂ ಸಹಕರಿಸಿ ಎಂದು ಕಹಳೆ ನ್ಯೂಸ್ ವರದಿ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವರದಿಗೆ ಸ್ಪಂದಿಸಿದ ಪ್ರಖ್ಯಾತ ವೈದ್ಯ ಡಾ ಉದಯಕುಮಾರ್ ಹಾಗೂ ಆರ್.ಎಸ್.ಎಸ್. ನ ಸಂಸ್ಥೆಯಾದ ಸೇವಾ ಭಾರತಿ ಜೊತೆ ಸೇರಿ ಈತನಿಗೆ ಸಹಾಯ ಹಸ್ತ ನೀಡಿದ್ದಾರೆ.

ಜಾಹೀರಾತು

ಒಂದು ತಿಂಗಳ ಮಟ್ಟಿಗೆ ಅತನಿಗೂ ಆತನ ಕುಟುಂಬಕ್ಕೂ ಬೇದಾದ ಎಲ್ಲಾ ರೀತಿಯ ಸಹಕಾರವನ್ನೂ ನೀಡಿದ್ದಾರೆ.

ಇದು ಕಹಳೆ ನ್ಯೂಸ್ ಇಂಪ್ಯಾಕ್ಟ್ !