Recent Posts

Saturday, September 21, 2024
ಸುದ್ದಿ

ಕರ್ನಾಟಕದಲ್ಲಿ ಭಾರತ್ ಬಂದ್ ವಿಫವಾಗುವ ಮುನ್ಸೂಚನೆ ಹಿನ್ನಲೆ, ವಾಮಮಾರ್ಗ ಅನುಸರಿಸಿದ ರಾಜ್ಯಸರ್ಕಾರ ; ಸೋಮವಾರ ರಾಜ್ಯಾದ್ಯಂತ ಬಲವಂತವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ಕಹಳೆ ನ್ಯೂಸ್

ಮಂಗಳೂರು ಸೆ.9: ಸೋಮವಾರ ಸೆ.10 ರಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಭಾರತ ಬಂದ್ ಕರೆ ನೀಡಿದೆ.

ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಂಬ ಕಾರಣವನ್ನೊಡಿ ರಾಜ್ಯ ಸರಕಾರವೇ ಮುತವರ್ಜಿವಹಿಸಿ‌ ರಾಜ್ಯಾದ್ಯಂತ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಸೋಮವಾರ ಸೆ.10 ರಂದು ರಜೆ ಘೋಷಿಸುವ ಮೂಲಕ ವಾಮಮಾರ್ಗ ಅನುಸರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹಿರಾತು

ರಾಜ್ಯದಲ್ಲಿ ಬಂದ್ ವಿಫಲವಾಗೂವುದು ಬಹುತೇಕ ಖಚಿತವಾಗುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ನಾಳೆ ರಜೆ ಘೋಷಿಸಲು ಅದೇಶ ಮಾಡಿದ್ದು, ರಾಜ್ಯ ಸರಕಾರದ ಹಣೆಬಹರ ಬೀದಿಗೆ ಬಿದ್ದಿದೆ‌.

ಸರಕಾರದ ಈ ನಡೆಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ‌.