Recent Posts

Sunday, September 22, 2024
ಸುದ್ದಿ

“ ಕ್ರಿೈಸ್ತನಿಂದ ಕೃಷ್ಣನೆಡೆಗೆ ” ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಪೂರ್ವವಾದ ವಿವಾಹ ; ಹಿಂದೂ ಸಂಪ್ರದಾಯದಂತೆ ನವಜೀವನಕ್ಕೆ ಪಾದಾರ್ಪಣೆ ಮಾಡಿದ ಕ್ರೈಸ್ತ ದಂಪತಿ – ಕಹಳೆ ನ್ಯೂಸ್

ಮುಳ್ಳೇರಿಯ : ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಪೂರ್ವವಾದ ವಿವಾಹವೊಂದು ಜರಗಿತು. ಶ್ರೀ ಮಹಾವಿಷ್ಣುವಿನ ಪರಮ ಭಕ್ತನಾದ ಅರುಣ್ ರವಿ ಎಂಬ ಕಾಸರಗೋಡಿನ ಕ್ರೈಸ್ತಮತದ ವ್ಯಕ್ತಿಯೊಬ್ಬರು ತನ್ನ ವಿವಾಹ ಸಮಾರಂಭವನ್ನು ಶ್ರೀ ಕ್ಷೇತ್ರದಲ್ಲಿ ಇರಿಸಿಕೊಂಡಿದ್ದರು.

ವಧುವಿನ ಹಾಗೂ ವರನ ಕಡೆಯ ಹಿರಿಯರ ಸಂಪೂರ್ಣಒಪ್ಪಿಗೆಯೊಂದಿಗೆ ಈ ಸಮಾರಂಭವು ನಡೆದಿತ್ತು. ವಿಶೇಷವೇನೆಂದರೆ ಕಾಸರಗೋಡಿನ ಹಿರಿಯ ಧಾರ್ಮಿಕ ಹಾಗೂ ರಾಜಕೀಯ ನೇತಾರ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಪೂರ್ಣ ಹಿಂದೂ ಧಾರ್ಮಿಕ ವಿವಾಹ ವಿಧಿಯ ಪ್ರಕಾರವೇ ಜರಗಿತು. ಕೇರಳದ ಪತ್ತನಂತ್ತಿಟ್ಟ ಜಿಲ್ಲೆಯ ಫೇಭಾ ಎಂಬ ಯುವತಿಯು ಕ್ರಿೈಸ್ತನಿಂದ ಕೃಷ್ಣನೆಡೆಗೆ ಆಕರ್ಷಿತಳಾಗಿ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಅಪಾರ ನಂಬಿಕೆಯುಳ್ಳವಳಾಗಿದ್ದಳು. ಇವರಿಬ್ಬರ ಅಭಿಲಾಷೆಗೆ ಒತ್ತಾಸೆಯಾಗಿ ಎರಡೂ ಕುಟುಂಬಗಳ ಹಿರಿಯರೂ ಬೆಂಬಲವಾಗಿ ನಿಂತದ್ದು ವಿಶೇಷವಾಗಿತ್ತು.
ಕುಂಟಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಆಶೀರ್ವಾದದೊಂದಿಗೆ ವೈದಿಕ ವಿಧಾನಗಳು ಎಸ್.ಎಂ. ಉಡುಪ ಇವರ ನೇತೃತ್ವದಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಎ.ಬಿ.ವಿ.ಪಿಯ ಪುಂಡೂರು ಘಟಕದ ಯುವಕರು ಸಂಪೂರ್ಣವಾಗಿ ಈ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಜಾಹೀರಾತು


ಕೊಡಗಿನ ಪ್ರಕೃತಿ ವಿಕೋಪದ ಮರೆಯಲ್ಲಿ ಕ್ರೈಸ್ತಮಿಷನರಿಗಳು ಬಡಹಿಂದು ಜನತೆಯನ್ನು ಏಮಾರಿಸಿ ಮತಾಂತರ ಮಾಡುತ್ತಿದ್ದರೆ ಇದಕ್ಕೆ ತದ್ವಿರುದ್ದವಾಗಿ ಅದೇ ಪಂಗಡದವರು ಮರಳಿ ಮಾತೃಧರ್ಮದ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಲು ಮುಂದಾಗುತ್ತಿರುವುದನ್ನು ಸಮಸ್ತ ಹಿಂದೂ ಸಮಾಜಕ್ಕೆ ಸಂತೋಷವಾದ ವಿಚಾರವಾಗಿದೆ ಎಂದು ಈ ವಿವಾಹದ ವಿಧಿವಿಧಾನಗಳ ಧಾರ್ಮಿಕ ನೇತೃತ್ವ ವಹಿಸಿದ್ದ ಹಿಂದೂ ಯುವ ಚಿಂತಕ ಎಸ್.ಎಂ ಉಡುಪ ಅಭಿಪ್ರಾಯಪಟ್ಟರು.