Friday, September 20, 2024
ಸುದ್ದಿ

ಮನವಿ ಮಾಡಿದರೂ ಸ್ಪಂದಿಸದ ಶಾಸಕರು, ಸಂಸದರ ಮಧ್ಯೆ ಸಮಸ್ಯೆ ಅರಿತು ಪರಿಹಾರ ಹುಡುಕುವ ಪುತ್ತೂರಿನ ಶಾಸಕ ; ರಸ್ತೆ ದುರಸ್ತಿಗೊಳಿಸಿ ಗಣೇಶೋತ್ಸವದ ಶೋಭಾಯಾತ್ರೆಗೆ ಸಹಕಾರಿಯದ ಸಂಜೀವಣ್ಣ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಹೃದಯ ಭಾಗದ ಬಸ್ ನಿಲ್ದಾಣದ ಅಶ್ವಥ ಕಟ್ಟೆಯ ಬಳಿಯಿಂದ ಅರುಣಾ ಚಿತ್ರಮಂದಿರದ ವರೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಗಣೇಶೋತ್ಸವದ ಶೋಭಾಯತ್ರೆಯು ಅದೇ ಮಾರ್ಗವಾಗಿ ಸಾಗಬೇಕಾಗಿತ್ತು, ಆದರೆ, ಆ ರಸ್ತೆಯ ಸ್ಥಿತಿಯನ್ನು ಗಮನಿಸಿದರೆ, ಅದು ತೀರಾ ಕಷ್ಟಕರವಾಗಿತ್ತು ಇದನ್ನರಿತ ಪುತ್ತೂರಿನ ಶಾಸಕರದ ಸಂಜೀವ ಮಠಂದೂರು ಅವರು ಮೇರೆಗೆ ಜಿಲ್ಲಾ ಅಧಿಕಾರಿಯವರಿ ಮನವಿ ಮಾಡಿ ಕೊಡದರ ಫಲಶ್ರುತಿಯಾಗಿ ಪುತ್ತೂರು ನಗರ ಸಭೆಯು ತುರ್ತು ಅಗಿ ಪುತ್ತೂರಿನ ಬಸ್ಸು ನಿಲ್ದಾಣದ ಬಳಿ ಅಶ್ವಥ ಮರದ ಬಳಿಯಿಂದ ಅರುಣ ಚಿತ್ರಮಂದಿರದ ವರೆಗೆ ರಸ್ತೆಯ ಹೊಂಡ ಗುಂಡಿಯನ್ನು ದುರಸ್ತಿಗೊಳಿಸಿದೆ.

ಈ ರಸ್ತೆಯಲ್ಲಿ ಈಗ ಪುತ್ತೂರಿನ ಗಣೇಶೋತ್ಸವದ ಟ್ಯಾಬ್ಲೋ ಮತ್ತು ಗಣೇಶೋತ್ಸವದ ಶೋಭಾಯಾತ್ರೆಯು ನಿರ್ಭಿತಿಯಿಂದ ಸಾಗಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜನರು ಮಾನವಿ ಮಾಡಿಯೂ ಕೆಲಸ ಮಾಡದ ಶಾಸಕರು, ಅಧಿಕಾರಿಗಳ ಮಧ್ಯೆ ಜನರ ಸಮಸ್ಯೆಯನ್ನು ತಾವೇ ಅರಿತು ಸಮಸ್ಯೆಯನ್ನು ಪರಿಹಾರ ಮಾಡಿದ ಪುತ್ತೂರು ಶಾಸಕರಿಗೆ ಜನ ಆಭಾರಿಗಳಾಗಿದ್ದಾರೆ‌.

ಜಾಹೀರಾತು