Friday, September 20, 2024
ಸುದ್ದಿ

ದೇವರ ಆಶೀರ್ವಾದ ಇದ್ದರೆ ಮುಂದೆ ನಾನೇ ಮುಖ್ಯಮಂತ್ರಿ ಎಂದ ಡಿ. ಕೆ. ಶಿವಕುಮಾರ್ – ಕಹಳೆ ನ್ಯೂಸ್

ಕಲಬುರಗಿ, ಸೆ17 : ಒಂದು ವೇಳೆ ಭಗವಂತನ ಕೃಪೆ ಇದ್ದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ, ಅದಕ್ಕೆ ಯಾವುದೇ ಅವಸರ ಇಲ್ಲ ಎಂದು ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. 

ಸರಕಾರ ರಚನೆ ಮಾಡುವಾಗ ರಾಹುಲ್ ಗಾಂಧಿ ತೀರ್ಮಾನಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬದ್ಧರಾಗಿದ್ದೇವೆ. ನಾನು ಯಾವುದೇ ತರಹದ ತಪ್ಪು ಮಾಡಿಲ್ಲ. ನನಗೆ ಸಂಕಷ್ಟ ಎದುರಾದಾಗ ದೇವರು ಅದನ್ನು ಎದುರಿಸುವ ಶಕ್ತಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಅರ್ಜೆಂಟ್‌ನಲ್ಲಿ ಹೋದರೆ ಅಪಘಾತ ಜಾಸ್ತಿ ಆಗುತ್ತದೆ. ಹಾಗಾಗಿ ನಿಧಾನವಾಗಿ ನಮ್ಮ ಸರಕಾರ ಹೋಗುತ್ತಿದೆ. ಸಚಿವ ಡಿ. ಕೆ. ಶಿವಕುಮಾರ್, ಆಪರೇಷನ್ ಕಮಲದ ಹೆಸರಲ್ಲಿ 15 ರಿಂದ 16 ಶಾಸಕರು, ಮಾಜಿ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ. ಬಿ.ಸಿ. ಪಾಟೀಲ್, ರಹೀಮ್ ಖಾನ್ ಸಹಿತ ಅನೇಕ ಜನರನ್ನು ಸಂಪರ್ಕ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜಾಹೀರಾತು