Friday, September 20, 2024
ಸುದ್ದಿ

ದುಷ್ಕರ್ಮಿಗಳಿಂದ ಹಿಂದೂ ಮುಖಂಡನ ಕೊಲೆಯತ್ನ – ಕಹಳೆ ನ್ಯೂಸ್

ಗುರುಪುರ: ಹಿಂದೂ ಸಂಘಟನೆಯ ಮುಖಂಡ, ಪೊಳಲಿ ನಿವಾಸಿ ಹರೀಶ್‌ ಶೆಟ್ಟಿ(38) ಅವರನ್ನು ನಾಲ್ವರ ತಂಡವೊಂದು ಕಡಿದು ಕೊಲೆಗೆ ಯತ್ನಿಸಿದ ಘಟನೆ ಗುರುಪುರ  ಕೈಕಂಬ ಸಮೀಪದ ಗುರುಕಂಬಳ ಶಾಲೆಯ ಮುಂಭಾಗದ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ 8ರ ಸುಮಾರಿಗೆ  ಸಂಭವಿಸಿದೆ.

ಹರೀಶ್‌ ಶೆಟ್ಟಿ ಅವರು ರಾಜ್‌ ಅಕಾಡೆಮಿ ಸಮೀಪ ಇರುವ ಪತ್ನಿ ಮನೆಗೆ ದಿನಸಿ ಸಾಮಗ್ರಿಗಳನ್ನು ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಬೈಕ್‌ ಗುರುಕಂಬಳ ಸಮೀಪ ಸಾಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ  ಬಂದ ನಾಲ್ವರು ದುಷ್ಕರ್ಮಿಗಳ ತಂಡ ಹರೀಶ್‌ ಅವರನ್ನು ತಲವಾರಿನಲ್ಲಿ ಕಡಿದು ಪರಾರಿಯಾಗಿದ್ದಾರೆ. ಇವರ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.  ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರು ಬಸ್ಸಿನ  ಟೈಂ ಕೀಪರ್‌ ಆಗಿದ್ದು ಎಲ್ಲರೊಂದಿಗೆ ಆತ್ಮೀಯರಾಗಿದ್ದರು. ಹಿಂದೂ ಸಂಘಟನೆಗಳ ಮೂಲಕ ಕೆಲವೊಂದು ಸಮಾಜಮುಖೀ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಹಲ್ಲೆ ಯಾಕಾಗಿ ನಡೆದಿದೆ ಎನ್ನುವುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಜಾಹೀರಾತು

ಹಲ್ಲೆ ಸುದ್ದಿಯಾಗುತ್ತಿದ್ದಂತೆ  ಕೈಕಂಬದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣ ಗೊಂಡಿತ್ತು. ಬಜಪೆ ಪೊಲೀಸರು ತತ್‌ಕ್ಷಣ ಧಾವಿಸಿ ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ. ಶಾಸಕ ಭರತ್‌ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.