Friday, September 20, 2024
ಸುದ್ದಿ

ಕಾಮಾಗಾರಿ ಪೂರ್ತಿಗೊಳಿಸಲು ನಳಿನ್ ಕುಮಾರ್ ಸಲಹೆ – ಕಹಳೆ ನ್ಯೂಸ್

ಮಂಗಳೂರು: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಕುರಿತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು.

ಈ ಸಭೆಯಲ್ಲಿ ಕರಾವಳಿ ಭಾಗದಲ್ಲಿನ ಸಮಸ್ಯೆಯ ಬಗೆಗೆ ಚರ್ಚಿಸಲಾಯಿತು. ನೆಲ್ಯಾಡಿ ಭಾಗದಲ್ಲಿನ ಭೂ ಸಮಸ್ಯೆ, ಟೋಲ್‌ಗೇಟ್, ಪ್ಯಾಚ್‌ವರ್ಕ್, ಉಳಿದ ಕಾಮಾಗಾರಿಯನ್ನು ಪೂರ್ತಿಗೊಳಿಸಬೇಕೆಂದು ನಳಿನ್ ಕುಮಾರ್ ಸಲಹೆಯಿತ್ತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಿಜಿನಲ್ ಆಫೀಸರ್, ಮಂಗಳೂರು ಹಾಗೂ ಹಾಸನ ವಿಭಾಗದ ಪ್ರಾಜೆಕ್ಟ್ ಡೈರೆಕ್ಟರ್, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು